
ಬ್ರಾಹ್ಮಣರು ಪೂಜೆ ಮಾಡಿಕೊಂಡು ಯಾರಿಗೆ ತೊಂದರೆ ಕೊಡದೆ ತಮ್ಮ ಪಾಡಿಗೆ ಇದ್ದವರು ಅಂತ ನೀವು ಅಂದುಕೊಂಡಿದ್ದೀರ ಅಂದು ಕೊಳ್ಳುತ್ತೇನೆ. ಆದರೆ ಅವರು ಮಾತಿನಲ್ಲಿ ನಿಸ್ಸೀಮರು ಎಂತಹ ಯುದ್ಧಗಳಿಗೆ ಕಾರಣಕರ್ತರಾಗಿದ್ದರು ಎಂಬುದರ ಚರಿತ್ರೆ ಅರಿವು ಅನೇಕರಿಗೆ ಇದ್ದಂತಿಲ್ಲ. ಪ್ರಾಚೀನ ತಲೆಮಾರುಗಳಿಂದಲೇ ಅಕ್ಷರ ಉದ್ಯೋಗದ ಮೇಲೆ ನೆಲೆ ಕಟ್ಟಿಕೊಂಡವರಿಗೆ ಹಳೇ ದಾಖಲೆಗಳನ್ನು ಕಾಲಮಾನಕ್ಕೆ ತಕ್ಕಂತೆ ಮಾರ್ಪಡಿಸಿ ಹೊಸದನ್ನು ಆ ಜಾಗದಲ್ಲಿ ಇರಿಸಲು ತಿಳಿದಿರಲಿಲ್ಲ ಎಂಬ ಮುಗ್ಧತೆ ಬೇಡ. ಭಗವದ್ಗೀತೆಯೂ ಅಂತಹ ಸಾಕಷ್ಟು ತಿದ್ದುಪಡಿ ಕಂಡಿದೆ ಎಂಬುದರೆಡೆ ಗಮನ ಹರಿಯಲಿ. ಅವರಲ್ಲಿ ಸಾಹಿತ್ಯ ಬರೆಯುವವರ ಆಚಾರ ವಿಚಾರವೇ ಬೇರೆ, ಅವರ ಸಾಹಿತ್ಯದ ಕೈಚಳಕವೇ ಬೇರೆ ಇರುವಂತಹದ್ದು ಈಗಲೂ ಕಣ್ಣೆದುರಿಗೇ ಸಿಗುತ್ತದೆ. ಮೌರ್ಯ ಸಾಮ್ರಾಜ್ಯ ಕಟ್ಟಿದ ಚಾಣಕ್ಯನಿಂದ ಹಿಡಿದು ದಕ್ಷಿಣದ ಚೋಳರು, ನಮ್ಮ ಕರ್ನಾಟಕದಲ್ಲಿಯೇ ಕೃಷ್ಣದೇವರಾಯ, ಮೈಸೂರು ಒಡೆಯರಂತಹ ಕ್ಷತ್ರೀಯರ ಚುಕ್ಕಾಣಿ ಹಿಡಿದಿದ್ದವರು ಬ್ರಾಹ್ಮಣರು ಎಂಬುದಕ್ಕೆ ಬೇಕಾದಷ್ಟು ದಾಖಲೆಗಳಿವೆ. ಅದರಂತೆಯೇ ಕೇರಳ ಮತ್ತು ಕೊಡಗಿನಲ್ಲಿ, ಹೈದರ್ ಮತ್ತು ಟಿಪ್ಪು ಸುಲ್ತಾನನಿಂದ(ಸುಬ್ಬರಸಯ್ಯ) ಹಿಡಿದು ಲಿಂಗಾಯತ ರಾಜರ ಆಳ್ವಿಕೆವರೆಗೆ ಅವರ ವ್ಯವಸ್ಥೆಯಿಂದ ಯಾರು ಹೊರಗಿರಲಿಲ್ಲ. ಬ್ರಾಹ್ಮಣ್ಯ ಅಷ್ಟು ಗಟ್ಟಿಯಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿತ್ತು. ಈಗಲೂ ಅದೇ ನಡೆಯುತ್ತಿದೆ ಆದರೆ ಚಿಕ್ಕ ಬದಲಾವಣೆ ಒಗ್ಗಟ್ಟಿನ ಹೆಸರಿನಲ್ಲಿ ಇನ್ನೊಂದು ಸಮೂದಾಯದ ಮೂಲವನ್ನು ಹತ್ತಿಕ್ಕಿ ತಾವು ಹೇಳಿದಂತೆ ಇರಬೇಕು ಎಂಬ ಅಜ್ಞಾತವಾಗಿ ವಿಷಯ ಹೇರುವುದರ ಮೂಲಕ ಸಮಾಜವನ್ನು ಒಡೆಯಲಾಗುತ್ತಿದೆ. ಮುಸ್ಲಿಂರ ಹೆಸರಿನಲ್ಲಿ ಬೆದರಿಸಲಾಗುತ್ತಿದೆ. ಇನ್ನು ಐವತ್ತು ವರ್ಷಕ್ಕೆ ಅವರ ಜನಸಂಖ್ಯಾ ಸ್ಪೋಟವಾಗುತ್ತದೆ ಎಂದು ಮಾತನಾಡುವವರು ಬೆಂಗಳೂರಿನ ನಾಲ್ಕು ದಿಕ್ಕಿನ ಮೋರಿಗಳಿಂದ ಬರುತ್ತಿರುವ ವಾಸನೆ ಆ ಊರನ್ನು ಕಾಂಕ್ರಿಟ್ ಮರಳು ಕಾಡಾಗಿ ಮಾರ್ಪಡಲು ಹೆಚ್ಚು ಸಮಯ ಉಳಿಸಿಕೊಂಡಿಲ್ಲ ಎಂಬಂತಹದನ್ನು ಗಮನಿಸದೆ ಉಳಿದೆಲ್ಲ ಸಂಶಯಗಳನ್ನು ಹುಟ್ಟು ಹಾಕುತ್ತಾರೆ. ಕರ್ಮ ಸಿದ್ಧಾಂತ ಗೊತ್ತಿರುವವರು ಮೊದಲು ಅದನ್ನೂ ಯೋಚಿಸಬೇಕಲ್ವೇ?..
ಬೇರೆ ಬೇರೆ ಕಾಲಘಟ್ಟದಲ್ಲಿ ಬೇರೆ ಬೇರೆ ಪ್ರದೇಶದ ರಾಜರು ಕೊಡಗಿನ ಬೇರೆ ಬೇರೆ ಗಡಿಯನ್ನು ಆಳಿದ್ದಾರೆ. ಆ ಕಾಲದಲ್ಲೆಲ್ಲ ಹೊಸ ನಿವಾಸಿಗಳು ಸೇರ್ಪಡೆ ಆಗಿದ್ದಾರೆ. ಎರವ, (ವಯನಾಡ್ ಮೂಲ ಎನ್ನುವ ಅವರಲ್ಲಿ ಮೂರು ಪಂಗಡಗಳಿವೆ, ಇವರ ಮಂದಿಯಲ್ಲಿ ಉತ್ತರ ಕರ್ನಾಟಕ, ಮಹಾರಾಷ್ಟ್ರದವರ ಸಾಮ್ಯತೆಯೂ ಇದೆ) ಮರ್ತ, ಅಡಿಯ, ನಾಯರ್ ಇವರೆಲ್ಲ ಈಗಿನ ಕೇರಳದವರು ಅಂದಿನ ಕೊಡಗು ಗಡಿಯವರೇ ಆಗಿದ್ದಿರಲೂ ಬಹುದು. ಇದಕ್ಕೆ ಕಾರಣ ಚೇರ, ಪಾಂಡ್ಯ ಇವರ ಆಳ್ವಿಕೆಯಲ್ಲಿ ದಕ್ಷಿಣ ಕೊಡಗಿನ ಅನೇಕ ಭಾಗ ಅವರ ರಾಜ್ಯದೊಳಗೆ ಸೇರಿತ್ತು. ಎರವರು 500ವರ್ಷಗಳ ಹಿಂದೆ ಆಗ ಇದ್ದ ಸೈನಿಕರು, ನಾಯಕರು ಆಗಿದ್ದ ಅನೇಕ ಕೊಡವ ಕುಟುಂಬದವರ ಸೇವಕರಾಗಿ ಇದ್ದಂತಹವರು. ಆದರೆ ಯಾರೇ ಬಂದು ಆಳಿ ಹೋದರೂ ಯುಗಗಳಿಂದ ಅವರಿಂದ ಹೊರತಾದ ಮೂಲ ನಿವಾಸಿಗಳ ಗುಂಪು ಒಂದೇ ರೀತಿಯ ಪದ್ಧತಿ, ಭಾಷೆಯನ್ನು ಅನುಸರಿಸುತ್ತ ಬಂದಿದೆ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ.(ರಾಮಾಯಣದಲ್ಲಿ ದಕ್ಷಿಣ ಭಾರತದಲ್ಲಿ ಮಾನವ ಸಮೂದಾಯದ ಅಸ್ತಿತ್ವವಿದ್ದುದರ ಪ್ರಸ್ತಾಪವೇ ಇಲ್ಲ. ಆದರೆ ರಾಮ ಮತ್ತು ರಾವಣ ಈಶ್ವರನನ್ನು ಪೂಜಿಸಿದ ವಿಚಾರಗಳಿವೆ, ವಾಲ್ಮೀಕಿ ರಾಮಾಯಣ ಕಾಲದ್ದೇ ಜೈನ ಮತ್ತು ಬೌದ್ಧ ರಾಮಾಯಣ ಕೂಡ ಇದೆ, ಅದರಂತೆ ಮೂರು ಸಾವಿರ ಈಗ ಅದಕ್ಕೂ ಹೆಚ್ಚಿನ ರಾಮಾಯಣ ಬರೆಯಲಾಗಿದೆ, ಈ ಅವೈದಿಕ ರಾಮಾಯಣದಲ್ಲಿ ವಾನರ ಎಂದು ಸಂಸ್ಕೃತದಲ್ಲಿ ಹೇಳಿರುವುದನ್ನು, ಕೆಲವೊಂದರಲ್ಲಿ ವಾನರರು, ಕ್ರೋಢರು, ಸತ್ಯಪುತ್ರರು ಇತ್ಯಾದಿ ಪ್ರಸ್ತಾಪವಿದೆ. ತೀರ್ಥಂಕರರ ಆಯಸ್ಸು ಆಗ ಐನೂರಕ್ಕೂ ಹೆಚ್ಚಿತ್ತು ಎನ್ನುತ್ತಾರೆ ಜೈನ ಆಧ್ಯಾತ್ಮ ತಜ್ಞರು) ಅಂದರೆ ಆಗ ಕ್ರೋಢ ಎಂಬುದು ಕಾಡು ಪ್ರದೇಶವಾಗಿತ್ತು ಅಲ್ಲಿ ವಾಸಿಸಲು ಸಾಧ್ಯವಿದ್ದುದು ಅಂತಹ ಮಾರ್ಷಲ್ ರೇಸ್ ಗಳಿಗೆ ಮಾತ್ರ. ಅವರು ತಮ್ಮ ಹಿಂಬಾಲಕರು, ಸೇವಕರು, ಅನುಯಾಯಿಗಳೊಂದಿಗೆ ಕಟ್ಟಿದ ನಾಡು ಕುಡಗ ಪ್ರದೇಶ. ಅದೇ ಕಾರಣಕ್ಕೆ ಕೊಡವರ ಹೆಸರು ನಾಡಿನ ಹೆಸರಿನೊಂದಿಗೆ ಶತಮಾನಗಳಿಂದ ಉಳಿದುಕೊಂಡು ಬಂದಿರುವುದು.
ಮಾರ್ಷಲ್ ರೇಸ್ ಅಂದಾಕ್ಷಣ ಮೂಲ ನಿವಾಸಿ ಎಂಬುದನ್ನು ಮತ್ತು ಅವರಿಗೆ ಅವರದೇ ಆದ ಭಾಷೆ ಆಚಾರ ವಿಚಾರಗಳಿತ್ತು ಎಂಬುದನ್ನು ಹೇಗೆ ಅಲ್ಲಗಳೆಯುತ್ತೀರಿ? ಈಗ ನಿಮ್ಮ ಕಣ್ಣ ಮುಂದೆ ನಾವಿಲ್ಲವೇ? ಎಲ್ಲ ಕ್ಷೇತ್ರಗಳಲ್ಲೂ ಇಷ್ಟು ಚಿಕ್ಕ ಸಮೂದಾಯದವರು ಮಾಡುತ್ತಿರುವ ಸಾಧನೆಗಳನ್ನು ಬೇರೆ ಯಾವುದಾದರು ಸಮೂದಾಯದವರು ಮಾಡುತ್ತಿರುವುದು ಕಾಣಸಿಗುತ್ತಿದೆಯೇ? ಬುಡಕಟ್ಟು ಪದದ ಅರ್ಥ ಗೂಗಲ್ ಹುಡುಕಿದರೂ ಸಿಗುತ್ತದೆ.
ಶಡ್ಯೂಲ್ಡ್ ಟ್ರೈಬ್ ಸಾಂವಿಧಾನಿಕವಾಗಿ ಹಿಂದುಳಿದವರಿಗೆ ಕಲ್ಪಿಸಲಾಗಿರುವ ಸೌಲಭ್ಯ, ವ್ಯವಸ್ಥೆಯಾದರೂ, ಬುಡಕಟ್ಟು ಎಂಬುದು ಕೂಡ ಸಂವಿಧಾನದ ಅಡಿ ಒಂದು ಸಂಸ್ಕೃತಿಯ ರಕ್ಷಣೆಗಿರಬೇಕಾದ ವ್ಯವಸ್ಥೆ ಅಲ್ಲವೇ? ಕೊಡವರಿಗೆ ಅವರದೇ ಆದ ಭಾಷೆ, ಉಡುಪು, ತೊಡುಪು, ಸಂಸ್ಕೃತಿ ಇರುವುದು ಕಾಣಿಸುತ್ತಿಲ್ಲವೇ?
ಎರವ, ಹೊಲೆಯ ಇತರ ಸಮುದಾಯಗಳ ಬಗ್ಗೆ ನೀವು ಹೇಗೆ ವಿಶ್ಲೇಷಣೆ ನಡೆಸುವಿರಾ? ಕೊಡವ ಪದದ ಅರ್ಥವೇನು?
ಹೊಲೆಯ ಕೊಡವ ಭಾಷೆಯಲ್ಲೆ ಪೊಲೆಯ, ಪೊಲೆ ಎಂದರೆ ಎಂದರೆ ಹೊರಗಾದವರು. ಕೊಡಗು ಹೆಚ್ಚಾಗಿ ಜೈನರು ಆಡಳಿತ ನಡೆಸಿದ ಪ್ರದೇಶ. ಒಂದು ಕಾಲದಲ್ಲಿ ಇಡೀ ಭಾರತ ಆಳಿದವರು ಜೈನ ಅರಸರೇ ಎಂದರೂ ತಪ್ಪಲ್ಲ. ಅವರು ಅಹಿಂಸಾವಾದವನ್ನು ಪ್ರತಿಪಾದಿಸಿದ ಅವೈದಿಕರು. ಅವರ ಆಡಳಿತದಲ್ಲಿ ತಮ್ಮದೇ ಅಕ್ಕ ತಂಗಿಯರನ್ನು ಗರ್ಭವತಿ ಮಾಡಿದಂತವರು, ಬಲತ್ಕಾರಿಗಳು, ತಂದೆ ತಾಯಿಯರನ್ನು ಕೊಂದಂತವರು ಇಂತಹವರನ್ನೆಲ್ಲ ನೇಣಿಗೆ ಹಾಕದೆ ಅಥವಾ ಕಲ್ಲು ಹೊಡೆದು ಸಾಯಿಸದೆ ಬದುಕು ಬದುಕಲು ಬಿಡು, ಅವರ ದುಷ್ಟ ಕರ್ಮದ ಫಲ ಅವರು ಅನುಭವಿಸಲು ಅವರು ಜೀವಿಸಬೇಕು. ಈ ಸಿದ್ಧಾಂತದಡಿ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸುತ್ತಿದ್ದುದೇ ಅವರು ನೀಡುತ್ತಿದ್ದ ಶಿಕ್ಷೆ. ಒಳ್ಳೆಯ ಕುಟುಂಬದಿಂದಲೇ ಹೊರಹಾಕಲ್ಪಟ್ಟವರನ್ನೇ ಹೊಲೆಯ ಎಂದಿರುವುದು. ಅವರ ವಂಶಗಳನ್ನೇ ಅಸ್ಪೃಶ್ಯರನ್ನಾಗಿಸಿ ಹತ್ತಿರವೇ ಸೇರಿಸಿಕೊಳ್ಳದೆ, ಧಾರ್ಮಿಕತೆ ಹೆಸರಿನಲ್ಲಿ ಪಾಪಿಗಳನ್ನಾಗಿ ಮಾಡಿದವರು. ಅವರ ಅಣತಿಯಂತೆ ಕ್ಷತ್ರೀಯರು ಒಪ್ಪತ್ತು ಊಟ ನೀಡಿ ಅತ್ಯಂತ ಕೀಳು ಮಟ್ಟದ ಕೆಲಸಗಳನ್ನು ಮಾಡಿಸುತ್ತಿದ್ದರು. ಅವರಿಗೆ ಕ್ಷೌರಿಕರು ಕ್ಷೌರ ಕೂಡ ಮಾಡುವಂತಿರಲಿಲ್ಲ.
ಕೊಡವ ಎಂಬ ಹೆಸರು ಕುಡಗ ಅಥವಾ ಕುಟಕ ಎಂಬ ಸ್ಥಳನಾಮದಿಂದ ಬಂದಿರುವಂತಹದ್ದು ಅದಕ್ಕೆ ಕುಡಚಿಗೆ ಮತ್ತು ಕೊಡವ ಕಾರಣನಿಗಿಡುವ ಆಚರಣೆ ಇರುವಂತಹದ್ದು ಪ್ರತ್ಯಕ್ಷ ಸಾಕ್ಷ್ಯ ನೀಡುತ್ತವೆ. ಜೈನ ಸಾಹಿತ್ಯಗಳಲ್ಲಿ ಕಂಡು ಬರುವ ಕುಟಕ/ಕುಡಗ ಎಂಬ ಹೆಸರಿಗೆ ಬೆಟ್ಟ ಗುಡ್ಡಗಳ ಪ್ರದೇಶ ಎಂಬ ಅರ್ಥವಿದೆ. ಅಂದರೆ ಕೃಷಿ ಆರಂಭಿಸುವುದಕ್ಕೂ ಮೊದಲೇ ಈ ಕುಟ/ಕುಡ ಪ್ರದೇಶದಲ್ಲಿ ನೆಲೆಸಿದ್ದವರಿಗೆ ಈ ಹೆಸರಿದೆ.
ಕೊಡವರಿಗೆ ಕುಲದೇವತೆ ಯಾರು & ಹೇಗೆ?
ಕುಡಚಿ, ಕುಡವ ಕೊಡವರ ಕಾರಣ ಅಂದರೆ ಅವರ ಪೂರ್ವಜರೇ ಕಾರಣ ಪುರುಷರು ಮತ್ತು ಕುಲದೇವರು. ಭರತನೊಂದಿಗೆ ಯುದ್ಧದಲ್ಲಿ ಸೋತ ಮಾದೇವನ ಇತರ ಮಕ್ಕಳು ವನಪ್ರಸ್ಥಾನ ಮಾಡಬೇಕಾದಾಗ ಕುಟಕ ಎಂಬ ಪ್ರದೇಶದ ದಟ್ಟ ಕಾಡಿನ ನದಿ ತೀರದಲ್ಲಿ ತಮ್ಮ ಮಕ್ಕಳನ್ನು ನೆಲೆ ನಿಲ್ಲಿಸಿದ ಪೂರ್ವಿಕ. ಶ್ರವಣಬೆಳಗೊಳದಲ್ಲಿ ನೆಲೆ ನಿಂತ ಭದ್ರಬಾಹು ಕೂಡ ಅವರಲ್ಲಿ ಒಬ್ಬ. ಹಾಗಾಗಿ ಕೊಡವರು ಈಶ್ವರನನ್ನು ಪ್ರಧಾನವಾಗಿ ಆರಾಧಿಸುತ್ತಾರೆ. ಜೀವಂತ ಪ್ರಕೃತಿಯನ್ನು ಅತಿಯಾಗಿ ನಂಬುತ್ತಿದ್ದ, ಬೇಡಿಕೊಳ್ಳುತ್ತಿದ್ದ ಈ ಬುಡಕಟ್ಟು ಜನರಿಗೆ ಕಾವೇರಿ ಕುಲ ದೇವಿ ಏಕೆಂದರೆ ನೀರಾವರಿ ಮತ್ತು ಭೂಮಿ ಕಾರ್ಯಕ್ಕೆ ವೈದಿಕರನ್ನು ಕರೆಸಿಕೊಂಡ ಇಲ್ಲಿಯ ರಾಜರು ಅವರ ಪದ್ಧತಿಯಂತೆ ಯಾವುದೇ ದೊಡ್ಡ ಯೋಜನೆಗಳಿಗೆ ಮುನ್ನ ಯಜ್ಞಗಳಿಗೆ ನರಬಲಿ ನೀಡಿರುವ ಇಲ್ಲಿಯ ಕುಲಗಳ ಕನ್ಯೆಯರು ಮತ್ತು ವೀರ ಬಲಿದಾನಿಗಳ ಹೆಸರುಗಳೇ ಕೊಡವರಿಗೆ ಕುಲದೇವರುಳಾಗಿ ಉಳಿದಿರುವುದು.
ಕೊಡವರು ಯಾವ ಕೆಲಸ ಮಾಡುವವರು?
ಆದಿಮ ಕೊಡವರು ಗೆಡ್ಡೆ ಗೆಣಸು ಮತ್ತು ಬೇಟೆಯಾಡುತ್ತಿದ್ದವರು, ನಂತರದಲ್ಲಿ ಪಶುಪಾಲನೆ ಮತ್ತು ಕೃಷಿಯಲ್ಲಿ ತೊಡಗಿಕೊಂಡವರು. ಬೆಳೆ ಮತ್ತು ಪಶುಗಳನ್ನು ಕದಿಯಲು ಇಡೀ ನಾಡಿನ ಮೇಲೆ ದಾಳಿ ಮಾಡುತ್ತಿದ್ದವರನ್ನು ತಡೆಯಲು ಸೈನಿಕರಂತೆ ಒಂದಾಗಿ ನಿಂತು ಕಾದಾಡಿದವರು. ನಂತರದಲ್ಲಿ ರಾಜಾಡಳಿತ ಆರಂಭಿಸಿರುವುದೂ ಇದೆ. ಕೊಂಗಾಳ್ವ, ಚಂಗಾಳ್ವರಂತಹ ಜೈನರು ಮತ್ತು ಸಸ್ಯಾಹಾರಿ ಅಮ್ಮಕೊಡವರ ಪ್ರಭಾವ ಹೆಚ್ಚಿತ್ತು. ಅದೇ ಕಾರಣಕ್ಕೆ ನಂತರದಲ್ಲಿ ಸಸ್ಯಾಹಾರಿ ಲಿಂಗಾಯತ ರಾಜರಿಗೆ ಕೊಡಗಿನಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿದೆ. ಹೀಗೆ ಆಳಿದವರೆಲ್ಲರ ಸೈನ್ಯ ತುಕಡಿಯಲ್ಲಿ ದುಡಿಯುತ್ತಲೂ ಬಂದವರು. ಅವರು ತಮ್ಮನ್ನು ತಾವು ಮಾತ್ರ ರಕ್ಷಿಸಿಕೊಳ್ಳುತ್ತಿರಲಿಲ್ಲ, ಇಂದಿನ ಸೈನಿಕರು ಜಾತಿ ಭೇದ ನೋಡದೆ ದೇಶ ಕಾಯುತ್ತಿದ್ದಾರಲ್ವೇ? ಹಾಗೆಯೇ ತಮ್ಮ ಇಡೀ ನಾಡನ್ನು ಕಾಯ್ದಂತಹವರು.
ಕೊಡವರು ತಮ್ಮನ್ನು ತಾವು ಕ್ಷತ್ರಿಯ/ಯೋಧ ಜನಾಂಗ (Marshal Race) ಎಂದು ಹೇಳಿಕೊಳ್ಳುತ್ತಾರೆ ಅಂದಮೇಲೆ ಬುಡಕಟ್ಟು ಸ್ಥಾನಮಾನ ಯಾಕೆ ಬೇಕು?
ರಾಜಕೀಯವಾಗಿ ಆಗಲಿ ವೈಯಕ್ತಿಕವಾಗಿಯೇ ಆಗಲಿ ಕಟ್ಟೆಮಾಡುವಿನಲ್ಲಿ ನಡೆದ ಘಟನೆ ನೆನಪಿರ ಬಹುದಲ್ವೇ? ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ನಾನಾ ರೀತಿಯಲ್ಲಿ ಬಲಿಷ್ಠ ಸ್ಥಾನಮಾನ ಗಳಿಸಿದಾಗ ಬಹುಸಂಖ್ಯಾತರು ಆರ್ಥಿಕತೆ, ವಿಧ್ಯಾಭ್ಯಾಸ ಅಥವಾ ಇತರೆ ಸಾಧನೆಗಳಲ್ಲಿ ಶಿಸ್ತು-ಶ್ರಮದ ಮೂಲಕ ಹೆಸರು ಮಾಡಿದ್ದರೆ ಅಂತಹ ಮೂಲ ನಿವಾಸಿಗಳ ಅಸ್ತಿತ್ವವನ್ನೇ ಅವಹೇಳನ ಮಾಡುತ್ತಿರುವಂತಹ ಘಟನೆ ಮರುಕಳಿಸುತ್ತಿವೆ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಜನರ ಪ್ರಾಚೀನ ಸಂಸ್ಕೃತಿಯನ್ನು ಚಾರಿತ್ರಿಕ ದೃಷ್ಟಿಕೋನದಿಂದ ಸಾಂವಿಧಾನಿಕವಾಗಿ ರಕ್ಷಿಸಬೇಕಾದ ಅವಶ್ಯಕತೆ ಇರುವುದರಿಂದ ಬುಡಕಟ್ಟು ಸ್ಥಾನಮಾನ ರಕ್ಷಣೆ ಬೇಕಾಗಿದೆ.
ಹಿಂದೂ ಧರ್ಮದ ಪ್ರಕಾರ ಶೂದ್ರರು ಹಾಗೂ ಕ್ಷತ್ರಿಯರು ಬುಡಕಟ್ಟು ಸ್ಥಾನಮಾನ ಹೊಂದಲು ಸಾಧ್ಯವಿಲ್ಲ.
ಹಿಂದೂ ಧರ್ಮ ಅಂದರೆ ವೈದಿಕರ ಕಾನೂನು ಅದು ವಾಸ್ತವದಲ್ಲಿ ಕೊಡವರಿಗೆ ಮತ್ತು ಇತರೆ ಅವೈದಿಕರಿಗೆ ಅನ್ವಯಿಸುವುದಿಲ್ಲ. ಜನಸಂಖ್ಯೆ ಕಡಿಮೆ ಇರುವ ಕಾರಣ ಮತ್ತು ಸಾರ್ವಜನಿಕ ನಿಯಮಕ್ಕೆ ಬದ್ಧರಾಗಿ ಭಾರತದ ಸಂವಿಧಾನದ ಅಡಿಯಲ್ಲಿರುವ ಆ ಕಾನೂನನ್ನು ಪಾಲಿಸ ಬೇಕಾಗಿ ಬಂದಿದೆ. ವೈದಿಕ ವೈಷ್ಣವ ಬ್ರಹ್ಮಣರು, ಕ್ಷತ್ರಿಯ, ಶೂದ್ರರು ಕುಳಿತು ಇತರರಿಂದ ದುಡಿಸಿಕೊಂಡವರು. ಕೊಡಗಿನಲ್ಲಿದ್ದ ಕ್ಷತ್ರೀಯ, ಬ್ರಾಹ್ಮಣ, ಶೂದ್ರ, ವೈಶ್ಯ, ಚಾಂಡಾಳ ಎಲ್ಲರೂ ತಾವೇ ದುಡಿದು ಬೆಳೆಯುವುದು, ಮಾರುವುದು, ರಕ್ಷಿಸಿಕೊಳ್ಳುವುದು, ಮುಂದಿನ ವರ್ಷಕ್ಕೆ ಉಳಿಸಿಕೊಳ್ಳುವುದು ಹೀಗೆ ಎಲ್ಲ ಕೆಲಸವನ್ನೂ ತಾವೇ ಮಾಡುತ್ತಿದ್ದವರು.
ಬುಡಕಟ್ಟು ಸ್ಥಾನಮಾನ ಬೇಕು ಎಂದ ಮೇಲೆ ಕ್ಷತ್ರಿಯರೆಂದು ಪಡೆದ ಸರಕಾರದ ಸವಲತ್ತುಗಳನ್ನು ವಾಪಾಸ್ ಕೊಡುವರೇ?
ಕ್ಷತ್ರೀಯರೆಂದು ನೀಡಲಾದ ಸವಲತ್ತು ಸಿಕ್ಕಿರುವುದು ದುಡಿಮೆ ನಿಷ್ಠೆಯ ಆಧಾರದ ಮೇಲೆ. ಈಗಿರುವ ಹಿಂದೂ ಕಾನೂನಿನ ಆಧಾರದ ಮೇಲೆ ಅಲ್ಲ.
ಒಂದು ವೇಳೆ ಬುಡಕಟ್ಟು ಸ್ಥಾನಮಾನ ದೊರೆತರೆ ಈಗ ಇರುವಂತೆ ಕ್ಷತ್ರಿಯರ ಆಯುಧಗಳಲ್ಲಿ ಒಂದಾದ ಕೋವಿಹಕ್ಕು ಮುಂದುವರಿಯಲು ಸಾಧ್ಯವೇ, ಏಕೆಂದರೆ ಕೋವಿಹಕ್ಕು ನೀಡಿದ್ದು ಕ್ಷತ್ರಿಯ ಪರಂಪರೆಯ ಅಡಿಯಲ್ಲಿ ಆಗಿದೆ.
ಕೊಡವರ ಕ್ಷತ್ರೀಯ ಪರಂಪರೆಯ ಹಿನ್ನಲೆ, ವಿಶೇಷತೆ ಅದಕ್ಕೆ ವೈದಿಕರು ಮತ್ತು ಅವೈದಿಕರ ಪದ್ಧತಿಗಳಿಗಿರುವ ವ್ಯತ್ಯಾಸ ಈಗಾಗಲೇ ತಿಳಿಸಲಾಗಿದೆ. ಇಂದಿಗೂ ಕೊಡವರ ಮತ್ತು ಕೊಡವ ಭಾಷಿಕರ ಮದುವೆ, ನಾಮಕರಣ, ಸಾವು ಪದ್ಧತಿ ಯಾವುದೇ ವೈದಿಕ ಧಾರ್ಮಿಕತೆಯ ಬ್ರಾಹ್ಮಣ್ಯವಿಲ್ಲದೆ ನಡೆಯುತ್ತಿರುವಂತಹದ್ದು. ಮೌಖಿಕವಾಗಿ ಬಂದಿರುವುದು ಬ್ರಿಟೀಷರ ದಾಖಲೆಗಳಿದ್ದರೂ ಈಗಲೂ ನಡೆಯುತ್ತಿರುವ ನಮ್ಮ ಪದ್ಧತಿಗಳೇ ಅದಕ್ಕೆ ನೇರ ಸಾಕ್ಷಿ.
ಹಾಗೆಯೇ ಈ ಕೋವಿ ಅಥವಾ ಬಂದೂಕು ಅನ್ನುವ ಆಯುಧದ ಕಾರಣಕರ್ತರು ಯಾರು? ಎಂದಿನಿಂದ ಈ ಆಯುಧವನ್ನು ಸಂಸ್ಕೃತಿಯಾಗಿ ಪ್ರೋತ್ಸಾಹಿಸಲಾಯಿತು, ಅದಕ್ಕಿಂತ ಮುಂಚೆ ಸಂಸ್ಕೃತಿಯಲ್ಲಿ ಒಳಗೊಂಡ ಆಯುಧ ಯಾವುದಾಗಿತ್ತು?
ಹೈದರ್ ಕೊಡಗಿಗೆ ಕಾಲಿಡುವುದಕ್ಕೂ ಮೊದಲು ಕೊಡವರಲ್ಲಿ ತಿರಿತೋಕ್ ಎಂಬ ಆಯುಧ ಬಳಕೆಯಲ್ಲಿತ್ತು, ಓಡಿಕತ್ತಿ, ಪೀಚೆಕತ್ತಿ, ಭರ್ಜಿ, ಬಿಲ್ಲು ಬಾಣ, ಕೃಷಿ ಪರಿಕರಗಳಲ್ಲದೆ ಇತರೆ ಅಸ್ತ್ರಗಳ ಸಂಗ್ರಹಗಾರವೇ ಅಯ್ಯನ ಮನೆಯಲ್ಲಿ ಇರುತ್ತಿತ್ತು.
ಸಾರ್ವಜನಿಕ ಹಿತಾಶಕ್ತಿಕ್ಕಾಗಿ ಬಂದ ಎಲ್ಲಾ ಪ್ರಶ್ನೆಗಳಿಗೆ ನೀಡಲಾದ ಉತ್ತರಗಳಿಗೆ ಸೂಕ್ತ ಸಾಕ್ಸಿ ಆಧಾರಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
ಜಮ್ಮ ಜಾಗದ ಮೂಲ ಪಟ್ಟೆದಾರಿಕೆ rtc documents. British London library documents, ಬ್ರಿಟೀಷ್ ಸಾರ್ವಜನಿಕ ಹಿತಾಸಕ್ತಿ ಕೋರ್ಟ್ ಅರ್ಜಿಗಳು ಮದ್ರಾಸ್, Coorg gazatteer, Coorg memories, Kodavara padhagalu-1860, tiny state of south India, Jainism in south India, Archeological evidences; Madikeri fort musium, ಕೊಡವರು, ಇತರರು ಮತ್ತು ವಿದೇಶಿಯರು, ದಾಖಲಿಸಿರುವ ಸಾಕಷ್ಟು ಪುಸ್ತಕಗಳು, ಕೊಡಗಿನ ಬೇರೆ ಬೇರೆ ಗ್ರಂಥಾಲಯ ಮತ್ತು ಕಾಲೇಜುಗಳಲ್ಲಿಯೂ ಸಾಕಷ್ಟು ಹಳೆಯ ಆಧಾರ ಗ್ರಂಥಗಳು ಲಭ್ಯ ಇವೆ.