Site icon nadubadenews.com

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

Spread the love
ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ಬೆಂಗಳೂರು, ಅ.04: ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಪ್ರತಿದಿನ ತಲಾ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುವುದು. ಆನ್‌ಲೈನ್‌ ಮೂಲಕ ಚಾರಣ ಪಥಗಳ ಟಿಕೆಟ್‌ ಕಾಯ್ದಿರಿಸಲು ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್‌ ಸಿಗದವರು ಬೇರೆ ಚಾರಣ ಪಥವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

https://aranyavihaara.karnataka.gov.in/ ವೆಬ್‌ಸೈಟ್‌ ಮೂಲಕ ಈಗ 5 ತಾಣಗಳಿಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದ್ದು, ಈ ತಿಂಗಳ ಕೊನೆಯೊಳಗೆ 40 ಚಾರಣಪಥಗಳನ್ನು ಸೇರಿಸಲಾಗುವುದು. ವನ್ಯಜೀವಿ ಸಫಾರಿ ಮತ್ತು ಬೋಟ್‌ ಸಫಾರಿಗೂ ಇದರಲ್ಲೇ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Exit mobile version