https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

News, Informatin , Enteetinement and Advertisement
20/04/202520/04/2025nadubadenews@gmail.comLeave a Comment on ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…
Spread the love
ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

ಮಡಿಕೇರಿ ಏ.20:  ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸಂತೋಷ್ ಮೇದಪ್ಪ 1 ಗೋಲು ದಾಖಲಿಸಿದರು. ಪೆಮ್ಮಂಡ  ಸುಹಾನ್ ಮಂದಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

        ಅಮ್ಮಣಿಚಂಡ ಮತ್ತು ಬೊವ್ವೇರಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಅಮ್ಮಣಿಚಂಡ ಜಯ ಸಾಧಿಸಿತು. ಅಮ್ಮಣಿಚಂಡ ಪರ ವಿಘ್ನೇಶ್ ಬೋಪಣ್ಣ 1 ಗೋಲು ದಾಖಲಿಸಿದರು. ಬೊವ್ವೇರಿಯಂಡ ಗ್ಯಾನ್ ಉತ್ತಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

       ನೆರವಂಡ ಮತ್ತು ಮಂಡೇಪಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಮಂಡೇಪಂಡ ಗೆಲುವು ದಾಖಲಿಸಿತು. ನೆರವಂಡ ಬೋಪಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

       ಸಣ್ಣುವಂಡ ಮತ್ತು ಸೋಮೆಯಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-2 ಗೋಲುಗಳ ಅಂತರದಲ್ಲಿ ಸಣ್ಣುವಂಡ ತಂಡ ಗೆಲುವು ದಾಖಲಿಸಿತು. ಸಣ್ಣುವಂಡ ಪರ ಪೊನ್ನಣ್ಣ ಹಾಗೂ ಸೋಮೆಯಂಡ ಪರ ಪುನೀತ್ ತಲಾ 1 ಗೋಲು ದಾಖಲಿಸಿದರು. ಸೋಮೆಯಂಡ ಅಪ್ಪಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

       ಇಟ್ಟಿರ ಮತ್ತು ಕಾಂಡಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 4-3 ಗೋಲುಗಳ ಅಂತರದಲ್ಲಿ ಕಾಂಡಂಡ ತಂಡ ಜಯ ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ ಹಾಗೂ ಇಟ್ಟಿರ ಪರ ಭವಿನ್ ತಲಾ 1 ಗೋಲು ದಾಖಲಿಸಿದರು.  ಭವಿನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.

      ಕರವಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‌ನಲ್ಲಿ 3-2 ಗೋಲುಗಳ ಅಂತರದಲ್ಲಿ ಕರವಂಡ ಗೆಲುವು ದಾಖಲಿಸಿತು.

Post navigation

ಮುದ್ದಂಡ ಕಪ್‌ ಹಾಕಿ, ಕೊಡವ ಚೋದ್ಯ, ಕುಪ್ಪಂಡ ಪ್ರಥಮ…
ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

Related Posts

ಬೇಕಾಗಿದ್ದಾರೆ…

ಬೇಕಾಗಿದ್ದಾರೆ…

21/02/202521/02/2025nadubadenews@gmail.com
ಮೀನಾಳ ಪೋಷಕರಿಗೆ ಶಾಸಕ ಮಂಥರ್‌ ಗೌಡ ಸ್ವಂತ ಹಣದಲ್ಲಿ ನಿರ್ಮಿಸಿರು ಮನೆ, ಸೋಮವಾರ ಹಂಚಿಕೆ

ಮೀನಾಳ ಪೋಷಕರಿಗೆ ಶಾಸಕ ಮಂಥರ್‌ ಗೌಡ ಸ್ವಂತ ಹಣದಲ್ಲಿ ನಿರ್ಮಿಸಿರು ಮನೆ, ಸೋಮವಾರ ಹಂಚಿಕೆ

05/06/202505/06/2025nadubadenews@gmail.com
ವಿವಿ ಮುಚ್ಚಿದರೆ ಕೊಡಗು ಬಂದ್‌ : ಮಾಜಿ ಸಚಿವ ಅಪ್ಪಚ್ಚು ರಂಜನ್‌

ವಿವಿ ಮುಚ್ಚಿದರೆ ಕೊಡಗು ಬಂದ್‌ : ಮಾಜಿ ಸಚಿವ ಅಪ್ಪಚ್ಚು ರಂಜನ್‌

16/02/202516/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version