
ಮಡಿಕೇರಿ, ಮೇ.06( ನಡುಬಾಡೆ ನ್ಯೂಸ್): ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಮಿತಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರುಗಳನ್ನಾಗಿ ನಾಮನಿರ್ದೇಶನಗೊಳಿಸಿದೆ.
ಶ್ರೀ ಕನ್ನಿಕಂಡ ಶ್ಯಾಮ್ ಬಿನ್ ಸುಬ್ಬಯ್ಯ ಮಕ್ಕಂದೂರು ಗ್ರಾಮ. ಮಡಿಕೇರಿ ,ಶ್ರೀ ಕುಶಾಲಪ್ಪ ಕಲಿಯಂಡ ಕೊಳಕೇರಿ ನಾಪೋಕ್ಲ್, ಮಡಿಕೇರಿ, ಸಾಮಾನ್ಯ ಮಹಿಳೆ ಸ್ಥಾನಕ್ಕಾಗಿ ಶ್ರೀಮತಿ ತಿಲಕ್ ಸುಬ್ರಾಯ, ತಣ್ಣಿಮಾನಿ, ಭಾಗಮಂಡಲ,ಮಡಿಕೇರಿ, ಹಿಂದುಳಿದ ವರ್ಗದಿಂದ,ಶ್ರೀ ಎ.ಎ.ರೈನಾ ಕಾರ್ಯಪ್ಪ ಯವಕಪಾಡಿ ಮಡಿಕೇರಿ. ಪರಿಶಿಷ್ಟ ಜಾತಿಯ ಶ್ರೀ ಜಯನ್ ಎ.ಎಂ., ಕರಿಕೆ ಮಡಿಕೇರಿ ,ಅಲ್ಪಸಂಖ್ಯಾತರ ಶ್ರೀ ಕೆ.ಯು.ಅಬ್ದುಲ್ ರಜಾಕ್, ಆಝದ್ ನಗರ, ಮಡಿಕೇರಿ.