ಮಡಿಕೇರಿ, ಜ.20: ಅರೆಭಾಷೆ ಜನಾಂಗದ ವಿವಿಧ ಸಂಘಟನೆಗಳು ಇಂದು ಮಡಿಕೆರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಬೃಹತ್ ಪ್ರತಿಭಟನಾ ಜಾತ ನಡೆಯಿತು.
ನಗರದ ಫಿ.ಮಾ. ಕಾರ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ, ವಿವಿಧ ಘೋಷಣಾ ಫಲಕ ಹಿಡಿದು, ಮೌನ ಮೆರವಣಿಗೆ ನಡೆಸಿದ ಸಂಘಟನೆಗಳು, ಜಿಲ್ಲೆಯಲ್ಲಿ ಶಾಂತಿ ಕದಡುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು….