Site icon nadubadenews.com

ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ

ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ
Spread the love
ಮಕ್ಕಳ ಸಾಹಿತ್ಯ ಪರಿಷತ್‌, ಮಡಿಕೇರಿ ಘಟಕಕ್ಕೆ  ಪದಾಧಿಕಾರಿಗಳ ಆಯ್ಕೆ

ಮಡಿಕೇರಿ, ಮಾ.21:- ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾ ಘಟಕದ, ಮಡಿಕೇರಿ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷರಾದ  ಅರಮನೆ ಪಾಲೆರ ಕೆ. ಮಂದಣ್ಣ ಅವರು ತಿಳಿಸಿದ್ದಾರೆ.

           ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ನಿರ್ದೇಶನದಂತೆ ಮಡಿಕೇರಿ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಶ್ರೀ ದಿನೇಶ್‌ ಪೆಗ್ಗೋಲಿ, ಪ್ರಧಾನ ಕಾರ್ಯದರ್ಶಿಯಾಗಿ ಕು. ಹರ್ಷಿತಾ ಶೆಟ್ಟಿ ಮನವಳಿಕೆ ಗುತ್ತು, ಹಾಗೂ ಸದಸ್ಯರಾಗಿ ಕೂಡಕಂಡಿ ಓಂಶ್ರೀದಯಾನಂದ, ಬೊಟ್ಟೋಳಂಡ ನಿವ್ಯ ಕಾವೇರಮ್ಮ, ಸುಮಿತ್ರ ಮೂರ್ನಾಡು, ಚೇನಂಡ ಜಯಂತಿ ಹರೀಶ್‌, ಲವೀನ್‌ ಲೋಪೇಜ್‌, ದಿಲಿಪ್‌ ಎನ್.ಬಿ, ನಾಪೋಕ್ಲು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂದಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version