
ಸೋಮವಾರಪೇಟೆ,ಜ.12: ವಿವೇಕಾನಂದ ಜಯಂತಿ ಅಂಗವಾಗಿ ಇಂದು ಬೆಳಿಗ್ಗೆ 7:30ಕ್ಕೆ ಸೋಮವಾರಪೇಟೆಯ, ವಿವೇಕಾನಂದ ವೃತ್ತದಲ್ಲಿ, ಸ್ವಾಮಿ ವಿವೇಕಾನಂದರಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಸೋಮವಾರಪೇಟೆ ಮಂಡಲ ಯುವ ಮೋರ್ಚಾದ ವತಿಯಿಂದ ವಿವೇಕನಡಿಗೆಯನ್ನು ಆರಂಭಿಸಲಾಯಿತು.
ಕಾರ್ಯಕ್ರಮದಲ್ಲಿ, ಯುಮಾರ್ಚಾ ಜಿಲ್ಲಾಧ್ಯಕ್ಷರಾದ ಮಹೇಶ್ ತಿಮ್ಮಯ್ಯ, ಮಾಜಿ ವಿಧಾನ ಪರಿಷತ್ ಸದಸ್ಯ ಮೇದಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಮನು ಕುಮಾರ್, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಮೋಹಿತ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ದರ್ಶನ್, ಎಸ್. ಸಿ. ಮೋರ್ಚಾ ಅಧ್ಯಕ್ಷರಾದ ಜಗ್ಗ ಹಾಗೂ ಪ್ರಧಾನ ಕಾರ್ಯದರ್ಶಿಯಾದ, ಪ್ರವೀಣ್ ಹಾಗೂ ಬಿಜೆಪಿ ಕಾರ್ಯಕರ್ತರು ಮತ್ತು ಸೈನಿಕ ತರಬೇತಿ ಸಂಸ್ಥೆ ಸಂಸ್ಥಾಪಕರಾದ ಚಂದ್ರಕುಮಾರ್ ಅವರು ಪಾಲ್ಗೊಂಡು ವಿವೇಕನಡಿಗೆಯನ್ನು ಯಶಸ್ವಿಯಾಗಿ ಸೋಮವಾರಪೇಟೆಯಲ್ಲಿ ನಡೆಸಲಾಯಿತು.