ಶನಿವಾರಸಂತೆ, ಮೇ.31: ಇಲ್ಲಿನ ಗ್ರಾಮಪಂಚಾಯಿತಿ ಮುಂಬಾಗದಲ್ಲಿ ಇರುವ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿನ ತರಕಾರಿ ಅಂಗಡಿಯವರು ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಗೋಡೌನ್ ರೀತಿಯಲ್ಲಿ ಬಳಸುತಿದ್ದು, ಗಾಳಿ ಮಳೆಗೆ ಪ್ರಯಾಣಿಕರು, ವಿದ್ಯಾರ್ಥಿಗಳು ತಂಗುದಾಣದೊಳಗೆ ನಿಲ್ಲಲಾಗದೆ ತೀವ್ರ ಕಷ್ಟ ಅನುಭವಿಸುತಿದ್ದಾರೆ.
ಸಂಬಂದಿಸಿದ ಗ್ರಾಮ ಪಂಚಾಯತಿ ಕಂಡು ಕಾಣದಂತಿರುವುದು ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.