https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಗೋಣಿಕೊಪ್ಪ ಪಾರ್ಕಿಂಗ್‌  ಸ್ಥಳದಲ್ಲಿ ಗಂಟೆಟ್ಟಲೆ ವಾಹನ  ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…

ಗೋಣಿಕೊಪ್ಪ ಪಾರ್ಕಿಂಗ್‌ ಸ್ಥಳದಲ್ಲಿ ಗಂಟೆಟ್ಟಲೆ ವಾಹನ ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…

News, Informatin , Enteetinement and Advertisement
12/06/202512/06/2025nadubadenews@gmail.comLeave a Comment on ಗೋಣಿಕೊಪ್ಪ ಪಾರ್ಕಿಂಗ್‌ ಸ್ಥಳದಲ್ಲಿ ಗಂಟೆಟ್ಟಲೆ ವಾಹನ ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…
Spread the love
ಗೋಣಿಕೊಪ್ಪ ಪಾರ್ಕಿಂಗ್‌  ಸ್ಥಳದಲ್ಲಿ ಗಂಟೆಟ್ಟಲೆ ವಾಹನ  ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…


ಗೋಣಿಕೊಪ್ಪ ಜೂ.12 (nadubadenews): ಗೋಣಿಕೊಪ್ಪ ಪಟ್ಟಣದಲ್ಲಿ ವಾಹನದಟ್ಟಣೆ ಹೆಚ್ಚಾಗಿರುವುದರಿಂದ, ಟ್ರಾಫಿಕ್ ಜಾಮ್ ಸಮಸ್ಯೆ ನಿರಂತರವಾಗಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇದೀಗ ಗೋಣಿಕೊಪ್ಪ ಪೊಲೀಸರು ನಗರ ಚೇಂಬರ್‌ ಆಫ್‌ ಕಾಮರ್ಸ್‌ಗೆ ಪತ್ರ ಬರೆದು ಕೆಲವು ನಿಬಂಧನೆಗಳನ್ನು ಅಳವಡಿಸಿಕೊಳ್ಳುವಂತೆ ಕೋರಿದ್ದಾರೆ.

ಗೋಣಿಕೊಪ್ಪ ಪಟ್ಟಣದಲ್ಲಿ ಅಂದಾಜು 400 ವಾಣಿಜ್ಯ ಮಳಿಗೆಗಳು ಇದ್ದು ಈ ಮಳಿಗೆಗಳಿಗೆ ಸಾಮಗ್ರಿಗಳನ್ನು ಹೊತ್ತು ತರುವ ವಾಹನಗಳು ಇನ್ನು ಮುಂದೆ ಬೆಳಿಗ್ಗೆ 07 ಗಂಟೆಯ ಒಳಗಡೆ ಹಾಗೂ ಸಂಜೆ 08ಗಂಟೆಯ ನಂತರ ಮುಖ್ಯರಸ್ತೆಯಲ್ಲಿ ನಿಲುಗಡೆಗೊಳಿಸಿ ಸಾಮಗ್ರಿಗಳನ್ನು ಇಳಿಸಲು ಅವಕಾಶ ಇರುವ ಬಗೆ ತಿಳುವಳಿಕೆ ನೀಡುವಂತೆ, ಹಾಗೆಯೇ ವರ್ತಕರು ತಮ್ಮ ಸ್ವಂತ ವಾಹನಗಳನ್ನು ದಿನಪೂರ್ತಿ ಮುಖ್ಯ ರಸ್ತೆಯಲ್ಲಿ ನಿಲುಗಡೆಗೊಳಿಸದೆ ಬೇರೊಂದು ಕಡೆ ವಾಹನ ನಿಲುಗಡೆ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸುವಂತೆ ನಗರ ಚೇಂಬರ್ ಆಫ್ ಕಾಮರ್ಸ್‌ ಆದ್ಯಕರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸುಗಮ ವಾಹನ ಸಂಚಾರಕ್ಕಾಗಿ ಈಗಿರುವ ಸಮಸ್ಯೆಯನ್ನು ಬಗೆಹರಿಸಲು ಅನುವು ಮಾಡಿಕೊಡಬೇಕಾಗಿ ಕೋರಿಕೊಂಡಿದ್ದಾರ

ಇದೇ ರೀತಿ ವರ್ತಕರು ತಮ್ಮ ಸ್ವಂತ ವಾಹನಗಳನ್ನು ಮಳಿಗೆಯ ಮುಂಭಾಗದ ಮುಖ್ಯ ರಸ್ತೆಯಲ್ಲಿ ಹೆಚ್ಚಿನ ಸಮಯ ನಿಲುಗಡೆಗೊಳಿಸಿದರೆ ವಾಹನವನ್ನು ಟೋಯಿಂಗ್ ಮೂಲಕ ಸಾಗಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಮ್ಮ ಪತ್ರದಲ್ಲಿ, ಪೊಲೀಸ್‌ ಇಲಾಖೆ ತಿಳಿಸಿದೆ.

Post navigation

ಕುಶಾಲನಗರ ಅಭಿವೃದ್ಧಿಗೆ ಸದಾ ಸಿದ್ಧ- ಶಾಸಕ ಡಾ.ಮಂತರ್ ಗೌಡ
ಜಿಲ್ಲಾಧಿಕಾರಿಗಳ ನಡೆ ಸಮಯೋಚಿತವಾಗಿದೆ, ಕರ್ತವ್ಯ ಮಾಡಲು ಬಿಡೋಣ.

Related Posts

ಅಮ್ಮತ್ತಿಲ್‌  ಅಕಾಡೆಮಿರ ಬಲ್ಯ ನಮ್ಮೆ: ಆಟ್‌ ಪಾಟ್‌ ಪೈಪೋಟಿ

ಅಮ್ಮತ್ತಿಲ್‌  ಅಕಾಡೆಮಿರ ಬಲ್ಯ ನಮ್ಮೆ: ಆಟ್‌ ಪಾಟ್‌ ಪೈಪೋಟಿ

06/03/202506/03/2025nadubadenews@gmail.com
ಅಗಲಿದ ಪ್ರಥಮ ಗುರುವಿಗೆ ಅಕ್ಷರತರ್ಪಣ….

ಅಗಲಿದ ಪ್ರಥಮ ಗುರುವಿಗೆ ಅಕ್ಷರತರ್ಪಣ….

20/01/202604/03/2026nadubadenews@gmail.com
ಕೊಡಗು ಮಳೆಹಾನಿಗೆ ತಕ್ಷಣ ಪರಿಹಾರಕ್ಕೆ ಕ್ರಮ : ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು ಭರವಸೆ

ಕೊಡಗು ಮಳೆಹಾನಿಗೆ ತಕ್ಷಣ ಪರಿಹಾರಕ್ಕೆ ಕ್ರಮ : ಉಸ್ತವಾರಿ ಸಚಿವ ಎನ್.‌ ಎಸ್.‌ ಬೋಸರಾಜು ಭರವಸೆ

26/06/202526/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us