ಬೆಂಗಳೂರು, ಜ.09: ಪ್ರಪಂಚದಲ್ಲಯೇ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಕೊಡವರು, ಜನಸಂಖ್ಯೆಯಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದರೂ, ಸಾಧನೆಯಲ್ಲಿ ಎಲ್ಲರನ್ನೂ ಮೀರಿಸಿದ್ದು, ಇಡೀ ದೇಶವೇ ಹೆಮ್ಮೆ ಪಡುವಂತದ್ದು. ಇವರ ಬೇಡಿಕೆಗಳಿಗೆ ಸರ್ಕಾರಗಳು ಸಮಯೋಚಿತವಾಗಿ ಸ್ಪಂದಿಸುವ ಮೂಲಕ, ಕೊಡವರಿಂದ ಮತ್ತಷ್ಟು ಸಾಧನೆಗೆ ಸಹಕಾರಿಯಾಗಬೇಕು ಎಂದು ರಾಜ್ಯ ಸಭಾಸದಸ್ಯರೂ, ಮಾಜೀ ಕೇಂದ್ರ ಸಚಿವರೂ ಆಗಿರುವ ಅಜಯ್ ಮಾಖೇನ್ ಹೆಳಿದರು.
ಇಂದು ಬೆಂಗಳೂರಿನಲ್ಲಿ, ಕುಂಡ್ಯೋಳಂಡ ಒಕ್ಕದ ಹಾಕಿನಮ್ಮೆಗೆ ಬಿಡುಗಡೆಯಾದ ಅನುದಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೊಡವರ ಸಂಖ್ಯೆ ಕಡಿಮೆ ಇರಬಹುದು ಆದರೆ, ಸಾಧನೆಯಲ್ಲಿ ಯಾರಿಗೂ ಕಮ್ಮಿ ಇಲ್ಲ ಎನ್ನುವುದನ್ನು ವಿಶ್ವಕ್ಕೆ ಕೊಡವರು ತೋರಿಸಿದ್ದಾರೆ. ಕೊಡವರ ಸಾಧನೆ ಇಲ್ಲ ಎನ್ನುವ ಕ್ಷೇತ್ರವೇ ಇಲ್ಲ, ಸೈನ್ಯದಿಂದ ಹಿಡಿದು ಕ್ರೀಡೆಯವರೆಗೆ, ಮನರಂಜನೆಯಿಂದ ಹಿಡಿದು ಉದ್ಯಮದವರೆಗೆ, ಶಿಕ್ಷಣದಿಂದ ಹಿಡಿದು ಸೇವೆಯವರೆಗೆ ಕೊಡವ ಹೆಸರು ಛಾಪು ಒತ್ತಿದೆ.ಅದರಲ್ಲೂ ಸರ್ಕಾರಗಳ ಯಾವುದೇ ವಿಷೇಶ ಮಾನ್ಯತೆ, ಅನುದಾನ, ಮೀಸಲಾತಿಯಂತಃ ಸೌಲಭ್ಯಗಳಿಲ್ಲದೆಯೇ ಕೊಡವರ ಸಾಧನೆ ಹೆಚ್ಚಿದೆ. ಇದು ಮಾದರಿ ಎಂದರು.
ದೂರದ ದೆಹಲಿಯವನಾದರೂ ನಮ್ಮ ಸೈನ್ಯದ ಪಿತಾಮಹರಾದ, ಫಿ,ಮಾ. ಕಾರ್ಯಾಪ್ಪ, ಜ.ತಿಮ್ಮಯ್ಯ ಸೇರಿದಂತೆ ಯೋಧರು ಮತ್ತು ಕೊಡವ ಕ್ರೀಡಾಪಟಗಳ ಬಗ್ಗೆ ಅರಿವಿತ್ತು, ಆದರೆ ಕೊಡವರ ಇಷ್ಟೊಂದು ಸಾಧನೆಯ ಬಗ್ಗೆ ತಿಳದುಕೊಂಡಿದ್ದು, ಹಾಕಿಯಲ್ಲಿ ಗಿನ್ನೆಸ್ ದಾಖಲೆ ಮಾಡಿದಾಗ. ಕೊಡವರ ಒಟ್ಟು ಸ್ಥಿತಿಗತಿ ಬೇಕು ಬೇಡಿಕೆಗಳ ಬಗ್ಗೆ ಮತ್ತಷ್ಟು ಆಸಕ್ತಿ ಬೆಳೆದು ಆಳಕ್ಕೆ ಹೋದಾಗ, ನನಗೆ ಈ ಜನಾಂಗದ ಬಗ್ಗೆ ವಿಷೇಶ ಅಭಿಮಾನ ಬೆಳೆಯಿತು. ಹಾಗಾಗಿಯೇ ತಾನು ಸಂಸತ್ತಿನಲ್ಲಿ ಕೊಡವ ಹಾಕಿಗೆ ಕೇಂದ್ರ ಸ್ರಕಾರವೂ ಅನುದಾನ ನೀಡಬೇಕೆಂದು ಮನವಿ ಮಾಡಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಸರ್ಕಾರದ ಯಾವೂದೇ ಪೂರಕ ಬೆಂಬಲ ಮೀಸಲಾತಿ ಇಲ್ಲದೆಯೇ ಕೊಡವರು ಇಷ್ಟು ಸಾಧನೆ ಮಾಡಿರುವಾಗ, ಸರ್ಕಾರಗಳು ಈ ಜನಾಂಗಕ್ಕೆ ವಿಷೇಶ ಮಾನ್ಯತೆ ನೀಡಿದರೆ ಕೊಡವರು ದೇಶಕ್ಕೆ ಮತ್ತಷ್ಟು ಹೆಮ್ಮೆ ತರುವ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಾಗಿ ಸರ್ಕಾರಗಳು ಕೂಡಲೇ ಕೊಡವರ ಎಲ್ಲಾ ಬೇಡಿಕೆಗಳನ್ನೂ ಈಡೇರಿಸಿ, ವಿಶೇಷ ಸ್ಥಾನಮಾನ ನೀಡುವ ಮೂಲಕ, ಕೊಡವ ಸಾಧನೆಯ ಹಾದಿಯ ಸೇತುವೆ ಆಗಬೇಕು. ತಾನೂ ಸದಾ ಕೊಡವರ ಪರ ದ್ವನಿಯಾಗಲಿದ್ದೇನೆ ಎಂದರು.