https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

Uncategorized
08/12/202408/12/2024nadubadenews@gmail.comLeave a Comment on ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…
Spread the love
ಕೊಡಗಿನ ಸರ್ವತೋಮುಖ ಅಬಿವೃದ್ದಿಗೆ ಕಟಿಬದ್ದನಾಗಿದ್ದು, ಸಾರ್ವಜನಿಕರು ನೇರವಾಗಿ ನಮ್ಮ ಕಛೇರಿಯನ್ನು ಸಂಪರ್ಕಿಸಿ: ಮಡಿಕೇರಿಯಲ್ಲಿ ನೂತನ ಕಛೇರಿಗೆ ಪಾದಾರ್ಪಣೆ ಮಾಡಿದ ಸಂಸದ, ಯಧುವೀರ್‌ ಒಡೆಯರ್‌ ಕರೆ…

ಮಡಿಕೇರಿ, ಡಿ.08: ಕೊಡಗು-ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ, ತಮ್ಮ ಅಧಿಕೃತ ಕಛೇರಿಗೆ ರಿಬ್ಬನ್‌ ಕತ್ತರಿಸುವ ಮೂಲಕ ಪಾದಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ನೂತನವಾಗಿ ನಮ್ಮ ಕಚೇರಿಯು ಇಂದಿನಿಂದ ಕೊಡಗುಜಿಲ್ಲೆಯಲ್ಲಿ ಸೇವೆಯ ಆರಂಭ ಮಾಡಿದೆ, ಸಾರ್ವಜನಿಕರು ತಮ್ಮ ಸಮಸ್ಯೆಗಳ ಆವ್ಹಾಲುಗಳನ್ನು ನಮ್ಮ ಈ ಕಚೇರಿಗೆ ನೇರವಾಗಿ ತಲುಪಿಸಬಹುದು.  ನಮ್ಮ ಸಲಹೆಗಾರರು ವಾರದ ಎಲ್ಲಾ ದಿವಸಗಳು ನಮ್ಮ ಕಚೇರಿಯಲ್ಲಿ ಇರುತ್ತಾರೆ. ನಾನು ಕ್ಷೇತ್ರ ಮೈಸೂರು,ಕೊಡಗಿನ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು.

ವಿಕಸಿತ ಭಾರತದಲ್ಲಿ ಕೊಡಗಿನ ಗ್ರಾಮ ಮಟ್ಟದ ಸೇವೆಗಳಿಗೆ ನಾನು ಸದಾ ಬದ್ಧನಾಗಿ ಸೇವೆ ಮಾಡಲು ಸಿದ್ದನಿದ್ದೇನೆ ಎಂದು ಹಿತ್ತ ನುಡಿಗಳನ್ನು ನುಡಿಯುತ್ತ, ಅತಿ ಶೀಘ್ರದಲ್ಲೇ ಕೊಡಗಿನ ಕುಶಾಲನಗರದಿಂದ ಶ್ರೀರಂಗಪಟ್ಟಣದವರೆಗಿನ ಕೆಂದ್ರ ಹೆದ್ದಾರಿಯ ಕಾಮಗಾರಿ ಅತಿ  ಶೀಘ್ರದಲ್ಲಿ ಚಾಲನೆ ನೀಡಿ ಕೊಡಗಿನ ಜನತೆಗೆ  ಸುಗಮ ಸಂಚಾರಕ್ಕೆ ಅನುವು ಮಾಡಿಕೋಡಲಾಗುವುದು, ಈಗಾಗಲೇ ಕೆಂದ್ರ  ಸರಕಾರ ಯೋಜನೆಗೆ ಅನುಮೋದನೆ ನಿಡಿದ್ದು, ಕೆಲ ದಿನಗಳಲ್ಲಿ NH-275 ನಲ್ಲಿ ಹೊಸ ಮೇಲ್ಸೇತುವೆ ಮತ್ತು ವರ್ಧಿತ ಸಂಚಾರ ನಿಯಮಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ನವೀಕರಣಗಳನ್ನು ಅನುಮೋದಿಸಲಾಗುತ್ತದೆ. ನಾವೆಲ್ಲರು ಒಟ್ಟಾಗಿ, ಪ್ರಗತಿ ಮತ್ತು ಅಭಿವೃದ್ದಿಯಲ್ಲಿ ಒಟ್ಟಾಗಿ ಸೇರೋಣ ಎಂದರು.

ಇದಕ್ಕೂ ಮೊದಲು ನೂತನ ಕಛೇರಿಯಲ್ಲಿ ಹೋಮ ಹವನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಈ ಸಂದರ್ಭ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್‌, ಮಾಜೀ ಶಾಸಕ ಮಂಡೆಪಂಡ ಅಪ್ಪಚ್ಚು ರಂಜನ್‌, ಮಹಿಳಾಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದು, ಸಂಸದರಿಗೆ ಶೂಭ ಹಾರೈಸಿದರು.

Post navigation

ಅತೀ ಸಣ್ಣ ಜನಾಂಗಗಳ ಏಳಿಗೆಗೆ ಶ್ರಮಿಸುವುದು ನಮ್ಮ ಹೊಣೆ: ಅರಮನೆ ಪಾಲೆ ಜನಾಂಗದ ಕ್ರೀಡಾಕೂಟದಲ್ಲಿ ಶಾಸಕ ಮಂಥರ್‌ಗೌಡ
ಸಾರ್ವಜನಿಕ ಸ್ಪಂದನೆಗೆ ಅನಗತ್ಯ ವಿಳಂಬ ಮಾಡುವ ಅಧಿಕಾರಿಗಳ ತಲೆದಂಡ ಖಚಿತ: ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಎಚ್ಚರಿಕೆ  

Related Posts

ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

ವಿರಾಜಪೇಟೆಲ್‌ ನಡ್ಂದ CMP ವೆಟರ್ನ್‌ಸುವಡ, 85ನೇ  ಕಾಪ್ಸ್‌ ನಾಳ್‌

29/10/202429/10/2024nadubadenews@gmail.com
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್ ನಾಳ್….

29/11/202429/11/2024nadubadenews@gmail.com
ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ವಿಜಯ

ಮೈಸೂರು ವಿಭಾಗ ಮಟ್ಟದ ಬಾಲಕರ ಕ್ರಿಕೆಟ್ ಪಂದ್ಯಾಟದಲ್ಲಿ ಕೊಡಗು ವಿಜಯ

08/10/202408/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version