https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

News, Informatin , Enteetinement and Advertisement
30/07/202530/07/2025nadubadenews@gmail.comLeave a Comment on ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ
Spread the love
ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದೆ; ಶಾಸಕರ ಸಭೆಯಲ್ಲಿ  ಮುಖ್ಯಮಂತ್ರಿ ಅಭಯ

ಬೆಂಗಳೂರ್‌,ಜು.30; (nadubadenews):  ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರು ಇಂದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳೊಂದಿಗೆ ವಿಧಾನಸೌಧ ತಮ್ಮ ಕಚೇರಿಯಲ್ಲಿ ವಿಶೇಷ ಸಭೆ ನಡೆಸಿದರು. ಕೊಡಗು ಜಿಲ್ಲೆಯ ಅಭಿವೃದ್ಧಿ, ಅನುದಾನ ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ   ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ, ಹಾಗೂ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಧನಾತ್ಮಕ ಅನುಷ್ಟಾನ, ಹಾಗೂ ವಿವಿಧ ಇಲಾಖೆಗಳ ಅಡಿ ನೀಡಲಾದ ಅನುದಾನ ಹಾಗೂ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಅರ್ಹರನ್ನು ತಲುಪುವಂತಾಗಬೇಕು, ಕೊಡಗಿನ ಅಭಿವೃದ್ದಿಗೆ ಸರ್ಕಾರ ಕಟಿಬದ್ದವಾಗಿದ್ದು, ಅನುದಾನದ ಕೊರತೆ ಇಲ್ಲ ಆದರೆ ಸದ್ಬಳಕೆಯಾಗುವಂತೆ ಗಮನ ಹರಿಸಬೇಕೆಂದು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ  ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಶ್ರೀ ಬಸವರಾಜ ರಾಯರೆಡ್ಡಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀ‌ರ್ ಅಹ್ಮದ್, ಮುಖ್ಯ ಮಂತ್ರಿಗಳ ಕಾರ್ದರ್ಶಿ ಬೊಳಂದಂಡ ಕಾವೇರಿ  ಹಾಗೂ ಇತರೆ ಪ್ರಮುಖರು ಹಾಜರಿದ್ದರು.   

Post navigation

ಏಳ್‌ನಾಡ್‌ ಕೊಡವ ಸಂಘ 39ನೇ ಒತ್ತೋರ್ಮೆ ಕೂಟ, ಕಕ್ಕಡ 18ನೇ ನಾರಾಚೆ. 
   ಆನೆದಾಳಿಗೆ ಬಾಳೆ ನಷ್ಟ;  ಮುಂದಾಗುವ ಅನಾಹುತಕ್ಕೆ ಇಲಾಖೆಯೇ ಹೊನೆ ರೈತ ಆಕ್ರೋಷ

Related Posts

ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

11/04/202511/04/2025nadubadenews@gmail.com
ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

ರಾಹುಲ್‌ ಗಾಂಧಿ ಹುಟ್ಟಹಬ್ಬ ಪ್ರಯುಕ್ತ ಕಲಿಕಾ ಸಾಮಗ್ರಿ ವಿತರಣೆ

22/06/202522/06/2025nadubadenews@gmail.com

ಮುಂಗಾರುವಿನಲ್ಲಿ  ಹೆಚ್ಚಿನ ಎಚ್ಚರ ವಹಿಸಲು ಶಾಸಕ ಡಾ.ಮಂತರ್ ಗೌಡ ಸೂಚನೆ…

23/05/202523/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version