ಮಡಿಕೇರಿ, ನ.4: ಗೊಂದಲದ ಗೂಡಾಗಿರುವ ವಕ್ಛ್ ಬೋರ್ಡ್ ದೇಶದಾದ್ಯಂತ ತಮಗೆ ತೋಚಿದ ಸಾರ್ವಜನಿಕ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಇರುವ ವಿಶೇಷ ಕಾಯ್ದೆಯನ್ನು, ಅಸ್ತ್ರವಾಗಿ ಬಳಸಿಕೊಂಡು ಸಾರ್ವಜನಿಕರ/ರೈತರ/ ಹಿಂದುಗಳ ಜಮೀನುಗಳನ್ನು ವಶಪಡಿಸುವ ಪ್ರಕ್ರೀಯೆಗೆ ಕೈಹಾಕಿದೆ. ಇದನ್ನು ಹಿಂದು ಜಾಗರಣ ವೇದಿಕೆಯು ಬಲವಾಗಿ ವಿರೋಧಿಸುತ್ತದೆ. ಮತ್ತು ಸಮಾಜದ ಪರವಾಗಿ ಸಂಘಟನೆಯು ನಿಂತಿದೆ.
ಕೊಡಗು ಜಿಲ್ಲೆಯ ಯಾವುದೇ ಭಾಗದಲ್ಲಿ ಆ ರೀತಿ ಸಾರ್ವಜನಿಕರ/ ರೈತರ/ಹಿಂದೂ ಬಾಂಧವರ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾದಲ್ಲಿ, ಅಥವಾ ನೋಟೀಸ್ ಬಂದಲ್ಲಿ, ತಕ್ಷಣ ನಮ್ಮ ಗಮನಕ್ಕೆ ತರಬೇಕಾಗಿ ವಿನಂತಿಸುತ್ತೇವೆ. ಹಾಗೂ ತಮ್ಮ ಜಾಗಕ್ಕೆ ಸಂಬಂಧಿಸಿ ಇತ್ತೀಚಿನವರೆಗಿನ ದಾಖಲೆಗಳನ್ನು ಎಲ್ಲರೂ ಕಡ್ಡಾಯವಾಗಿ ಮತ್ತೊಮ್ಮೆ ಪರಿಶೀಲಿಸುವಂತೆ ಹಿಂದು ಜಾಗರಣ ವೇದಿಕೆ ಕೋರುತ್ತದೆ. ಹಿಂಜಾ.ವೇ ಜಿಲ್ಲಾ ಸಂಯೋಜಕರಾದ, ಕುಕ್ಕೇರ ಅಜಿತ್ ಅವರು ತಿಳಿಸಿದ್ದಾರೆ, ಜಮೀನನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸಂಘಟನೆಯಿಂದ ನೀಡಲಾಗುವುದು. ಸಮಸ್ಯೆಗಳಿದ್ದಲ್ಲಿ, ಕುಕ್ಕೇರ ಅಜಿತ್ ಮಡಿಕೇರಿ, (ಜಿಲ್ಲಾ ಸಂಯೋಜಕರು.ಹಿಂಜಾ.ವೇ.):- 9019934981, ಚೇತನ್ ಶಾಂತಿನಿಕೇತನ ಮಡಿಕೇರಿ: (ಜಿಲ್ಲಾ ಸಹ ಸಂಯೋಜಕರು. ಹಿಂ.ಜಾ.ವೇ.)9448325136, ಯೋಗೇಶ್ ವೀರಾಜಪೇಟೆ: (ಜಿಲ್ಲಾ ಸಹ ಸಂಯೋಜಕರು. ಹಿಂ.ಜಾ.ವೇ.) 9449762686. ಶರತ್ ಪೊನ್ನಂಪೇಟೆ: (ಜಿಲ್ಲಾ ಸಹ ಸಂಯೋಜಕರು ಹಿಂ.ಜಾ.ವೇ.) 8762490207. ಬೋಜೆಗೌಡ ಸೋಮವಾರಪೇಟೆ, (ಜಿಲ್ಲಾ ಸಹ ಸಂಯೋಜಕರು.ಹಿಂ.ಜಾ.ವೇ. 7483018566 ಈ ಸಂಖ್ಯೆಗಳಲ್ಲಿ ಸಂಪರ್ಕಿಸಲು ಕೋರಿದ್ದಾರೆ.