Site icon nadubadenews.com

ಕೊಡಗಿನ ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ

ಕೊಡಗಿನ  ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ
Spread the love
ಕೊಡಗಿನ  ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ

     Nadubadenews ಮಡಿಕೇರಿ ಅ.10: ಕೆಎಸ್‍ಆರ್‍ಟಿಸಿ ಕೆಎ.12 ನಂಬರಿನ ಅಶ್ವಮೇಧ 5 ನೂತನ ಬಸ್‍ಗಳಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ನಗರದ ಕೆಎಸ್‍ಆರ್‍ಟಿಸಿ ಘಟಕದಲ್ಲಿ ಗುರುವಾರ ಚಾಲನೆ ನೀಡಿದರು.

ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ಅವರು ಇತ್ತೀಚೆಗೆ ಶನಿವಾರಸಂತೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳಿಗೆ ನಮ್ಮ ಕೊಡಗು ಜಿಲ್ಲೆಯ ಪ್ರಾದೇಶಿಕ ಸಾರಿಗೆ ನೋಂದಣಿ ಸಂಖ್ಯೆ ಆಗಬೇಕಿದೆ ಎಂದು ಮನವಿ ಮಾಡಲಾಗಿತ್ತು. ಅದರಂತೆ ಸಚಿವರು ಸ್ಪಂದಿಸಿದ್ದು, ಈಗ ಕಾರ್ಯ ರೂಪಕ್ಕೆ ಬಂದಿದೆ ಎಂದು ಶಾಸಕರು ಸಂತಸ ವ್ಯಕ್ತಪಡಿಸಿದರು.

       ದಸರಾ ವಿಶೇಷ ಸಂದರ್ಭವಾಗಿ ಈ ಬಸ್ಸ್‌ಗಳನ್ನು ಅಂತರ್‍ಜಿಲ್ಲೆಗೆ  ಕಲ್ಪಿಸಲಾಗುವುದು. ದಸರಾ ನಂತರ ಕೊಡಗು ಜಿಲ್ಲೆಯಲ್ಲಿ  ಸಂಚರಿಸಲಿದೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.

              ಕೆಎಸ್‍ಆರ್‍ಟಿಸಿ ಬಸ್‍ಗಳು ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತಷ್ಟು  ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲಿವೆ. ಶಕ್ತಿ ಯೋಜನೆ ಮಹಿಳೆಯರಿಗೆ ಉಪಯೋಗವಾಗಲಿದೆ  ಎಂದು ಹೇಳಿದರು.

       ಮಡಿಕೇರಿ ಪ್ರಾದೇಶಿಕ ಸಾರಿಗೆ ಸಂಬಂಧಿಸಿದಂತೆ 5 ಬಸ್‍ಗಳಿಗೂ ಒಳ್ಳೆಯ ನೋಂದಣಿ ಸಂಖ್ಯೆ ಸಿಕ್ಕಿದೆ. ಕೆಎ.12 ಎಫ್.01, 02, 03, 04, 05 ನೋಂದಣಿಯಾಗಿದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ವಿವರಿಸಿದರು. 

       ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಧರ್ಮಜ ಉತ್ತಪ್ಪ, ಪ್ರಮುಖರಾದ ಟಿ.ಪಿ.ರಮೇಶ್, ರಾಜೇಶ್ ಯಲ್ಲಪ್ಪ, ಚುಮ್ಮಿ ದೇವಯ್ಯ, ಪ್ರಕಾಶ್ ಆಚಾರ್ಯ, ಅಬ್ದುಲ್ ರಜಾಕ್, ನಂದಕುಮಾರ್, ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕರಾದ ಮಹಮ್ಮದ್ ಅಲಿ, ಇತರರು ಇದ್ದರು.

Exit mobile version