
ಪಾಲಂಗಾಲ,ಜ.10: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ಕೆದಮುಳ್ಳೂರು, ನಂ 474 ವಿವಿದೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ ಐದು ವರ್ಷ ಅವದಿಗೆ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಾಳೇಟಿರ ಜೀವನ್ ಮುದ್ದಯ್ಯ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ನಿರ್ದೇಷಕರುಗಳಾಗಿ, ಮಾಳೇಟಿರ ಬ್ರಂದತಿಮ್ಮಯ್ಯ, ಪುದಿಯನೆರವನ ಡಾಲು ಪೂಣಚ್ಚ, ಬಿ. ಕೆ. ಸಹದೇವ, ತಂಬಾಂಡ ಇಮ್ಮಿಪೊನ್ನಪ್ಪ, ಪ್ರವೀಣ್ ಕ್ರಾಸ್ತ, ಮಾಳೇಟಿರ ಡಾಟಿಗಣಪತಿ, ತುಳಸಿ, ಬಣ್ಣರ ನಂಜಪ್ಪ ಹಾಗೂ ಅನಿತಾ ಬಿ. ಜೆ ಇವರುಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ
ದಿನಾಂಕ 09/01/2025 ರಂದು ನಡೆದ ಅದ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಾಳೇಟಿರ ಪ್ರಶಾಂತ್ ಉತ್ತಪ್ಪ ಹಾಗೂ ಉಪಾಧ್ಯಕ್ಷರಾಗಿ ಮಾಳೇಟಿರ ಜೀವನ್ ಮುದ್ದಯ್ಯ ಅವರು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಚುನಾವಣಧಿಕಾರಿಯಾಗಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಣಿ ಕಾರ್ಯನಿರ್ವಹಿಸಿದರು.