https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

News, Informatin , Enteetinement and Advertisement
09/07/202509/07/2025nadubadenews@gmail.comLeave a Comment on   ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.
Spread the love
  ಕುಶಾಲನಗರ ಅಭಿವೃದ್ದಿಗೆ ಶ್ರಮಿಸಿ, ಅಧಿಕಾರಿಗಳೀಗೆ ಶಾಸಕ ಡಾ. ಮಂಥರ್‌ ಗೌಡ ಸೂಚನೆ.

ಕುಶಾಲನಗರ, ಜು.09;(nadubadenews):  ಕುಶಾಲನಗರ ಅಭಿವೃದ್ದಿಗೆ ಪೂರಕವಾಗಿ  ಸ್ಪಂದಿಸುವ ಮೂಲಕ, ಕಾರ್ಯಚಟುವಟಿಗೆಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮಡಿಕೇರಿ ಶಾಸಕ ಡಾ. ಮಂತರ್‌ ಗೌಡ ಸೂಚಿಸಿದರು. ಕುಶಾಲನಗರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಾಲೊಂಡು ಮಾತನಾಡಿದ ಶಾಸಕರು, ಜಿಲ್ಲೆಯ ಹೆಬ್ಬಾಗಿಲು, ಮತ್ತು ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಕುಶಾಲನಗರದ ಸರ್ವತೋಮುಖ ಅಭಿವೃದ್ದಿಗೆ ಸರ್ವರೂ ಶ್ರಮಿಸುವಂತೆ ಕರೆ ನೀಡಿದರು.

           ಯುಜಿಡಿ ಕಾಮಗಾರಿ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಪುರಸಭೆಯಿಂದ ನಿರ್ವಹಣೆ ವೆಚ್ಚ ಕೋರಿದ ಒಳಚರಂಡಿ ಮಂಡಳಿ ಅಧಿಕಾರಿಗಳ ವಿರುದ್ದ ಸದಸ್ಯರು ತೀವ್ರ ಆಕ್ರೋಷ ವ್ಯಕ್ತಪಡಿಸಿದರು. ಮುಂದಿನ ಮೂರು ತಿಂಗಳಲ್ಲಿ ಯುಜಿಡಿ ಕಾಮಗಾರಿಗೆ ಪೂರ್ಣ ಪ್ರಮಾಣದಲ್ಲಿ ಚಾಲನೆ ನೀಡುವಂತೆ ಶಾಸಕರು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. ರಾಜಕಾಲುವೆಗಳ ಒತ್ತುವರಿ ಬಗ್ಗೆ ಸದಸ್ಯ ಖಲೀಮುಲ್ಲಾ ಸಭಾಧ್ಯಕ್ಷ ಶಾಸಕರ ಗಮನಕ್ಕೆ ತಂದರು. ಕಾಲುವೆಗಳನ್ನು ಒತ್ತುವರಿ ಮಾಡಿ ಲೇಔಟ್ ಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ.ಮಂತರ್ ಗೌಡ, ರಾಜಕಾಲುವೆಗಳ ಸರ್ವೆಗೆ ಸೂಚನೆ ನೀಡಿದರು. ಗುಂಡಿ ಬಿದ್ದಿರುವ ರಸ್ತೆಗಳ ದುರಸ್ಥಿಗೆ ಕೂಡಲೆ ಕ್ರಮವಹಿಸಲು ಲೋಕೋಪಯೋಗಿ ಅಭಿಯಂತರರಿಗೆ ಶಾಸಕರು ಸೂಚಿಸಿದರು. ಪೌರಕಾರ್ಮಿಕರಿಗೆ ನಿವೇಶನಗಳನ್ನು ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಕೆ, ಸ್ಮಶಾನಕ್ಕೆ ಜಾಗ ಗುರುತಿಸುವುದು, ಹಳೆ ಸೇತುವೆ ಸುಂದರೀಕರಣ, ನೂತನ ಪುರಸಭೆ ಕಟ್ಟಡ ಮಳೆಯಿಂದ ಸೀಪೇಜ್ ಬಾರದಂತೆ ಕ್ರಮವಹಿಸುವುದು, ಸಾರ್ವಜನಿಕ ಲೈಬ್ರರಿಗೆ ಜಾಗ ಒದಗಿಸುವ ಬಗ್ಗೆ ಚರ್ಚೆ ಸೇರಿದಂತೆ ಕೊಡಗು-ಮೈಸೂರು ಜಿಲ್ಲೆಯ ಗಡಿ ಆರಂಭದಲ್ಲಿ ಡಿಜಿಟಲ್ ಸೈನ್ ಬೋರ್ಡ್ ಅಳವಡಿಕೆ, ಪರಿಸರ ಪೂರಕ ಸೈನ್ ಬೋರ್ಡ್ಗಳ ಅಳವಡಿಕೆಗೆ, ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಏಕಬಳಕೆ ಪ್ಲಾಸ್ಟಿಕ್ ನಿಷೇದದ ಬಗ್ಗೆ ಗಮಹರಿಸಲು ಶಾಸಕರು ಸೂಚಿಸಿದರು.

Post navigation

ಕರ್ನಾಟಕ ಕಾನೂನು ವಿವಿ 4ನೇಸ್ಥಾನವೀರಾಜಪೇಟೆಯ ವೆಂಕಟೇಶಕಾಮತ್
ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಡೆದ ಗುರುವಂದನ ಕಾರ್ಯಕ್ರಮ

Related Posts

ಕಳಿರ ಕೂಡೆ ಬಾಳ್‌ರ ಬಟ್ಟೆಕೂ ಒತ್ತ್‌ ಕೊಡಿ : ಮೈಸೂರ್‌ ಮಕ್ಕಡ ಹಾಕಿನಮ್ಮೆಲ್‌  ಬಾಳೆಯಡ ಕರುಣ್‌ ಕಾಳಪ್ಪ

ಕಳಿರ ಕೂಡೆ ಬಾಳ್‌ರ ಬಟ್ಟೆಕೂ ಒತ್ತ್‌ ಕೊಡಿ : ಮೈಸೂರ್‌ ಮಕ್ಕಡ ಹಾಕಿನಮ್ಮೆಲ್‌  ಬಾಳೆಯಡ ಕರುಣ್‌ ಕಾಳಪ್ಪ

07/05/202507/05/2025nadubadenews@gmail.com

ನಾಡುಬಾಡೆ ನ್ಯೂಸ್‌, 16.8.25

16/08/202516/08/2025nadubadenews@gmail.com
ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

ಸೂರಿಗಾಗಿ ಬೇಡುವ ಪರಿಸ್ಥಿತಿ, ಕೊಡವ ಭಾಷಿಕ ಜನಾಂಗಗಳ ಒಕ್ಕೂಟದ ಮಹಾಸಭೆಯಲ್ಲಿ ಬೇಸರ.

11/04/202511/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version