ಮಡಿಕೇರಿ, ಏ.11:- ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮುದ್ದಂಡ ದೇವಯ್ಯ ಬಣದ, ಬಿಜೆಪಿ ಬೆಂಬಲಿಗರು ದಿಗ್ವಿಜಯ ಸಾಧಿಸಿದ್ದಾರೆ.
ಇಂದು ನಡೆದ ಮತ ಎಣಿಕೆಯಲ್ಲಿ, ಬಿಜೆಪಿ ಬೆಂಬಲಿತ ಎಲ್ಲಾ 15 ಸದಸ್ಯರು ಜಯ ಸಾದಿಸಿದ್ದು, ನಿರ್ದೇಶಕರುಗಳಾಗಿ, ಮುದ್ದಂಡ. ಬಿ. ದೇವಯ್ಯ, ನಾಪಂಡ ರವಿ ಕಾಳಪ್ಪ ಪಳೆಯಂಡರಾಬಿನ್ ದೇವಯ್ಯ, ತಾಕೇರಿ ಪೊನ್ನಪ್ಪ, ಗೌತಮ್ ಗೌಡ ಮಾಚಿಮಂಡ ಸುವಿನ್ ಗಣಪತಿ, ಬಿ. ಎ. ಹರೀಶ್, ಪಡಿಯಮ್ಮನ ಮಹೇಶ್, ಚೆಟ್ಟಿ ಮಾಡ ಪ್ರಶಾಂತ್, ಕಡ್ಲೆರ ತುಳಸಿ ಮೋಹನ್, ವರದ ರಾಜ್ ಅರಸು, ಸುರೇಶ್ ಮಾಯಮುಡಿ, ಲೀಲಾ ಮೇದಪ್ಪ, ಕಾಕೂರು ಸಂದೀಪ್, ಹಾಲು ಮತದ ಮಹೇಶ್ ಅವರುಗಳು ಜಯಗಳಿಸಿದ್ದು ಈ ಗೆಲವು ಮುದ್ದಂಡ ದೇವಯ್ಯ ನೇತೃತ್ತವದ ಹಾಲೀ ಆಡಳಿತ ಮಂಡಳಿಯ ಕಾರ್ಯವೈಕರಿಗೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.