Site icon nadubadenews.com

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಕೊಡಗು ಘಟಕದ,  ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಕೊಡಗು ಘಟಕದ,  ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…
Spread the love
ಕರ್ನಾಟಕ ರಾಜ್ಯ ಬರಹಗಾರರ ಸಂಘ, ಕೊಡಗು ಘಟಕದ,  ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ…

Nadubadenews, ಮಡಿಕೇರಿ, ಅ.25: ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ, ಕೊಡಗು ಜಿಲ್ಲಾ ಘಟಕದ ವತಿಯಿಂದ  ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಜಿಲ್ಲಾ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿದೆ.  

ದಿನಾಂಕ 03-11-2024ನೇ ಭಾನುವಾರ ಮಧ್ಯಾಹ್ನ ಎರಡು ಘಂಟೆಗೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು,  ಜನರಲ್‌ ತಿಮ್ಮಯ್ಯ ಕ್ರೀಡಾಂಗಣ ರಸ್ತೆ, ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, ಸಾಹಿತಿ ಮತ್ತು ಕವಿಗಳಾದ, ಮೂಕಳೇರ ಟೈನಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು, ಶ್ರೀ ವೆಂಕಟೇಶ ಪ್ರಸನ್ನ ಅವರು ಉದ್ಘಾಟನೆ ಮಾಡಲಿದ್ದಾರೆ.  ಅರ್ಥಶಾಸ್ತ್ರ ಉಪನ್ಯಾಸಕಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಮಡಿಕೇರಿಯ ಶ್ರೀಮತಿ ಕಾನಡ್ಕ ಡೀನಾ ದೇವಯ್ಯ ಪ್ರಾಸ್ತಾವಿಕ ನುಡಿ ಯಾಡಲಿದ್ದಾರೆ.

ಮೂಕಳೆರ ಟೈನಿ ಸುರೇಶ್‌

ಕವಿಗೋಷ್ಠಿಯಲ್ಲಿ, ಕುಮಾರಿ ಯಶಿಕ ದೇವಯ್ಯ ಕೆ,,ಶ್ರೀ ಬಿ ತಪಾಷ ಲೋಕೇಶ್, ಶ್ರೀ ಪ್ರಥಮ್ ಚಿನ್ನಪ್ಪ, ಶ್ರೀ ಹೇಮಂತ್ ಪಾರೇರ, ಪಾರ್ವತಿ ಮೂರ್ನಾಡು, ಗೀತಾಂಜಲಿ, ಎನ್ ಎಮ್ ಸೋಮವಾರಪೇಟೆ, ರಾಧಿಕಾ ವಿಶ್ವನಾಥ್ ಮಡಿಕೇರಿ, ದೀಕ್ಷಿ ಪಟ್ಟಡ, ಪುಷ್ಪ ಡಿ ಎಚ್, ಯಶೋಧ ಪೇರಿಯಂಡ ಬಲಂಬೇರಿ, ಜಯಲಕ್ಷ್ಮಿ ಎಂ ಬಿ, ಶ್ರೀ ಮನೆಯಪಂಡ ಶೀಲಾ ಬೋಪಣ್ಣ, ಜನ್ಮತಾ ಎಸ್ ಪಿ, ಶ್ರೀಮತಿ ಹೇಮಲತಾ ಪೂರ್ಣಪ್ರಕಾಶ, ಶ್ರೀ ಜೀವನ್ ಹೆಚ್ ಕೆ, ಸೈಮನ್ ಎಸ್ ಮೇಕರಿ, ಶಬೀರ್ ಎ, ಪುಗ್ಗೇರ ಸುಮಿ ಸನ್ನು, ವತ್ಸಲ ಶ್ರೀಶ, ಅಬ್ದುಲ್ಲಾ ಮಡಿಕೆರಿ, ಮುಕ್ಕಾಟ ಹರಿಣಿ ಗಿರೀಶ್, ಶ್ರೀಮತಿ ಎಸ್ ಕೆ ಈಶ್ವರಿ ಕೊಡಗು, ಶ್ರೀ ಋಷಿಕ ಕೆ ಎಮ್, ಶ್ರೀಮತಿ ಕಡ್ಡರ ಜಯಲಕ್ಷ್ಮಿ ಅವರು ಬಾಗವಹಿಸಿ ಕನ್ನಡ ಕಾವ್ಯದ ರಸದೌತಣ ಬಡಿಸಲಿದ್ದಾರೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ

Exit mobile version