
ವಿರಾಜಪೇಟೆ, ಜು.09;(nadubadenews): ಕರ್ನಾಟಕ ಕಾನೂನು ವಿವಿಯ ಫಲಿತಾಂಶ ಪ್ರಕಟಗೊಂಡಿದ್ದು, ಮೂಲತಃ ವೀರಾಜಪೇಟೆ ನಿವಾಸಿ, ಬೆಂಗಳೂರು ಸಂತ ಜೋಸೆಫ್ ಲಾ ಕಾಲೇಜು ವಿದ್ಯಾರ್ಥಿ ಎನ್.ವೆಂಕಟೇಶ್ ಕಾಮತ್ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 2023-24 ನೇ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ 4 ನೇ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ. ಇವರು ಕೊಡಗಿನ ವೀರಾಜಪೇಟೆಯ ನಿವಾಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎನ್.ರವೀಂದ್ರನಾಥ್ ಕಾಮತ್ ಹಾಗೂ ವಿದ್ಯಾ ಕಾಮತ್ ದಂಪತಿಯ ಕಿರಿಯ ಪುತ್ರ.