ಪೊನ್ನಂಪೇಟೆ, ಮಾ.08: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್, ಕೊಡಗುಜಿಲ್ಲಾ ಘಟಕದ ಅಡಿಯಲ್ಲಿ ಬರುವ ಪೊನ್ನಂಪೇಟೆ ತಾಲೂಕು ಘಟಕಕ್ಕೆ ಪಧಾದಿಕಾರಿಗಳನ್ನು, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದ ಮೇರಗೆ ಆಯ್ಕೆ ಮಾಡಲಾಗಿದೆ ಎಂದು, ತಾಲೂಕು ಅದ್ಯಕ್ಷೆ ಬೊಟ್ಟಂಗಡ ಸುಮನ್ ಸೀತಮ್ಮ ತಿಳಿಸಿದ್ದಾರೆ.
ಅದರಂತೆ ಉಪಾಧ್ಯಕ್ಷರಾಗಿ, ಚಂಗುಲಂಡ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಳಿನಿ ಹೆಚ್.ಆರ್. ಜಿಲಾ ಸಮಿತಿ ಸದಸ್ಯರಾಗಿ ಮಲ್ಲಂಡ ಶೃತಿಯ ಮುದ್ದಪ್ಪ, ಸದಸ್ಯರುಗಳಾಗಿ, ಕೋಟ್ರಂಗಡ ಸಜಿನಿ ಸೋಮಯ್ಯ, ಅಲಿಮಾ.ಪಿ.ಹೆಚ್., ಕೊಟ್ಟಂಗಡ ವಿದ್ಯಾ ಕಾರ್ಯಪ್ಪ, ನೂರೇರ ಜೀವನ್ ಅಯ್ಯಪ್ಪ ಹಾಗೂ ತಿತೀರ ಸ್ವರಾಜ್ ಕುಟ್ಟಪ್ಪ ಅವರನ್ನು ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ ನೇಮಿಸಲಾಗಿದೆ ಎಂದು ಸುಮನ್ ಸೀತಮ್ಮ ಪ್ರಕಟಿಸಿದ್ದಾರೆ.