ಟಿ. ಶೆಟ್ಟಿಗೇರಿ, ಏ.08: ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರ 33ನೇ ಕೃತಿ ಸಿಪಾಯಿ ಮಾದಪ್ಪ ಕಾದಂಬರಿ ಬಿಡುಗಡೆಯಾಯಿತು.
ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಕಟ್ಟೆರ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕದಾನಿಗಳು, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಎಡಿಎಲ್ಆರ್ ಆದ, ಬಾನಂಗಡ ಅರುಣ್ ಞವರು ಕೃತಿ ಲೋಕಾರ್ಪಣೆ ಮಅಡಿದರು. ಕೊಟ್ಟುಕತ್ತಿರ ಸೋಮಣ್ಣ ಸಾಹಿತಿ, ಅಧ್ಯಕ್ಷರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ ಇವರು ಕೃತಿ ವಿಮರ್ಷಿಸಿದರೆ, ಕ್ಯಾ.ಬಿದ್ದಂಡ ನಾಣಿ ದೇವಯ್ಯ ಅವರು ವಿಷ್ಲೇಷಣೆ ಮಾಡಿದರು. ವೇದಿಕೆಯಲ್ಲಿ ಲೇಖಕಿ, ಶ್ರೀಮತಿ ಉಳುವಂಗಡ ಕಾವೇರಿ ಉದಯ ಸೇರಿದಂತೆ ಇತರರು ಉಪಸ್ತಿತರಿದ್ದರು.
ಸೇನೆಯ ಕತಾ ಹಂದರವನ್ನೊಳಗೊಂಡ, ಸುಮಾರು 327 ಪುಟಗಳ ಈ ಕಾಲ್ಪನಿಕ ಕಾದಂಬರಿಯನ್ನು ಓದಲು ಬಯಸುವವರು ಲೇಖಕಿ ಉಳುವಂಗಡ ಕಾವೇರಿ ಉದಯ ಅವರನ್ನು 9591366296 ಸಂಕ್ಯೆಯಲ್ಲಿ ಸಂಪರ್ಕಿಸಬಹುದು.