https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

Uncategorized
06/10/202406/10/2024nadubadenews@gmail.comLeave a Comment on ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…
Spread the love
ಆಟೋ/ಟ್ಯಾಕ್ಷಿ ಚಾಲಕರ ಮಕ್ಕಳಿಗೆ ವಿದ್ಯಾನೀಧಿ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಬೆಂಗಳೂರು, ಅ.06: ರಾಜ್ಯದಲ್ಲಿನ ಯೆಲ್ಲೋ ಬೋರ್ಡ್ ಟ್ಯಾಕ್ಸಿ ಚಾಲಕರ ಮತ್ತು ಆಟೋರಿಕ್ಷಾ ಚಾಲಕರ ಮಕ್ಕಳ ಮೆಟ್ರಿಕ್ ನಂತರದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾನಿಧಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಗ್ರಾಮ-ಒನ್, ಕರ್ನಾಟಕ-ಒನ್ ಮೂಲಕ ಸೇವಾ ಸಿಂಧು ವೆಬ್‍ಸೈಟ್ ಮೂಲಕ ಚಾಲಕರು, ಪೋಷಕರು ಚಾಲನಾ ಪರವಾನಗಿ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ವಿದ್ಯಾರ್ಥಿಯ ಆಧಾರ್ ಸಂಖ್ಯೆ ನೀಡಿ ಅರ್ಜಿಯನ್ನು ಸಲ್ಲಿಸಬಹುದು

ಕರ್ನಾಟಕದಲ್ಲಿ ಅಧಿಕೃತ ನೋಂದಣಿ ಆಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಡಿಪ್ಲೋಮ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ ಫಾರ್ಮ್, ನರ್ಸಿಂಗ್‌, ಎಂಬಿಬಿಎಸ್‌, ಬಿಇ, ಬಿ.ಟೆಕ್‌ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದವರು ಈ ಯೋಜನೆಗೆ ಅರ್ಹರಾಗಿರುತ್ತಾರೆ.

        ಸೇವಾ ಸಿಂಧು, (https://sevasindhu.karnataka.gov.in/), ಕರ್ನಾಟಕ ಒನ್‌ ಗ್ರಾಮ ಒನ್‌, ಬೆಂಗಳೂರು ಒನ್‌ನಲ್ಲಿ  ಅಗತ್ಯ ದಾಖಲೆ ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಯಾವ ಕೋರ್ಸ್‌ಗೆ ಎಷ್ಟು ಸಹಾಯಧನ?
ಪದವಿ ಪೂರ್ವ: ಪಿಯುಸಿ, ಐಟಿಐ, ಡಿಪ್ಲೋಮ ಹುಡುಗರಿಗೆ 2,500 ಸಾವಿರ ರೂ., ಹುಡುಗಿಯರಿಗೆ 3 ಸಾವಿರ ರೂ.
ಎಲ್ಲಾ ಪದವಿ : ಹುಡುಗರಿಗೆ 5 ಸಾವಿರ ರೂ., ಹುಡುಗಿಯರಿಗೆ 5,500 ರೂ.
ಎಲ್‌ಎಲ್‌ಬಿ, ಪ್ಯಾರಾ ಮೆಡಿಕಲ್‌, ಬಿ.ಫಾರ್ಮ್, ನರ್ಸಿಂಗ್‌ : ಹುಡುಗರಿಗೆ 7,500 ಸಾವಿರ ರೂ., ಹುಡುಗಿಯರಿಗೆ 8 ಸಾವಿರ ರೂ.
ಎಂಬಿಬಿಎಸ್‌, ಬಿಇ, ಬಿಟೆಕ್‌ : ಹುಡುಗರಿಗೆ 10 ಸಾವಿರ ರೂ., ಹುಡುಗಿಯರಿಗೆ 11 ಸಾವಿರ ರೂ.


ಯಾರು ಅರ್ಹರು?
          ಚಾಲಕರು, ಕರ್ನಾಟಕದ ನಿವಾಸಿಯಾಗಿರಬೇಕು. ರಾಜ್ಯದ ಯಾವುದೇ ಪ್ರಾದೇಶಿಕ, ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಮೋಟಾರು ಕ್ಯಾಬ್‌/ ಆಟೋರಿಕ್ಷಾ ಕ್ಯಾಬ್‌ ವರ್ಗಗಳ ವಾಹನಗಳನ್ನು ಚಲಾಯಿಸಲು ಸಾರಥಿ ತಂತ್ರಾಂಶದಲ್ಲಿ ಚಾಲ್ತಿಯಲ್ಲಿರುವ ಚಾಲನಾ ಪರವನಗಿ ಹೊಂದಿರುವ ಯೆಲ್ಲೋ ಬೋರ್ಡ್‌ ಟ್ಯಾಕ್ಸಿ ಮತ್ತು ಆಟೋರಿಕ್ಷಾ ಚಾಲಕರಾಗಿರಬೇಕು.
          ಚಾಲಕರ ಕುಟುಂಬದ ಎಲ್ಲಾ ಮಕ್ಕಳು ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ಚಾಲಕರ ಕುಟುಂಬದ ವಿದ್ಯಾರ್ಥಿಯು ಇತರ ವಿದ್ಯಾರ್ಥಿವೇತನ ಪಡೆಯುತ್ತಿದ್ದರೂ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ.


Post navigation

ಮುಖ್ಯ ಮಂತ್ರಿರ ಕಾರ್ಯದರ್ಶಿ ಆಯಿತ್‌  ಐ.ಎ.ಎಸ್.‌ ಅಧಿಕಾರಿ, ಬೊಳಂದಂಡ ಕಾವೇರಿ ನೇಮಕ
ಉಲಗ ಕೇಳಿರ ದಸರ ಅಂಜಿ ಪಾಜೆ ಕವಿವೊರ್ಮೆಕ್  ಮುಲ್ಲೇಂಗಡ ಮಧೋಷ್‌ ಪೂವಯ್ಯ…

Related Posts

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

ಮಡಿಕೇರಿಯಲ್ಲಿ ನಡೆದ ಅರೆಭಾಷೆ ಜನಾಂಗದ ಬೃಹತ್‌ ಪ್ರತಿಭಟನೆ.

20/01/202520/01/2025nadubadenews@gmail.com
ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

ಕನ್ನಡ ವಿಕಾಸ ರತ್ನ ಬಿರ್‌ದ್ ಪಡ್ಂದ ಬಲ್ಯಮೀದೇರಿರ ಧೃತಿಪೆಮ್ಮಯ್ಯ

07/12/202407/12/2024nadubadenews@gmail.com
ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

21/11/202421/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us