
ನಮ್ಮ ಸರ್ಕಾರ ಕೊಡಗಿಗೆ ಪೂರಕವಾದ ಅನುದಾನ ಮತ್ತು ಯೋಜನೆ ರೂಪಿಸಿದೆ, ವಿರೋಧಪಕ್ಷಗಳು ರಾಜಕೀಯಕ್ಕಾಗಿ ವಿರೋದಿಸುವದ ಬಿಟ್ಟು, ಕೇಂದ್ರದಿಂದ ನಮ್ಮ ಪಾಲಿನ ಅನುದಾನದ ಪಾಲು ತರಿಸಲಿ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಹೇಳಿದರು. ಇಂದಿನ ಮುಂಗಡ ಪತ್ರದಲ್ಲಿ, ಜಿಲ್ಲೆಗೆ ಕ್ರೀಡಾ ವಸತಿನಿಲಯ ನೀಡಿರುವುದ ಅತ್ಯತ್ತಮ ಬಳುವಾಳಿಯಾಗಿದೆ, ಅದಲ್ಲದೆ ಕೊಡವ ಪ್ರಾಧಿಕಾರ, ಮೂಲಭೂತ ಸೌಕರ್ಯಕ್ಕೆ ಅನುದಾನ, ವನ್ಯ ಪ್ರಾಣಿಗಳ ನಿಯಂತ್ರಣಕ್ಕೆ ಅನುದಾನ, ನೀರಾವರಿ ಯೋಜನೆಗೆ ಅನುದಾನ ಸೇರಿದಂತೆ ಜಿಲ್ಲೆಗೆ ಪೂರಕವಾದ ಸಾಕ್ಷಷ್ಟು ಯೋಜನೆಗಳು ಇದ್ದು, ಸಂಪೂರ್ಣ ಜನಪರ ಪ್ಯಾಕೇಜ್ ನೀಡಿದ ಮುಂಗಡವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ವಿರೋದ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದಲ್ಲಿ ಸರ್ಕಾರ ಹೊಂದಿರುವ ಇವರು, ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಮೊದಲು ತರಲಿ ಎಂದರಲ್ಲದೆ, ಕೊಡಗನ್ನು ಪ್ರತಿನಿಧಿಸುವ ಸಂಸದರು ಇದ್ದಾರ ಇಲ್ಲವಾ ಅನ್ನೋ ಸಂಶಯ ಕಾಡುತ್ತಿದೆ ಅದಕ್ಕೆ ಮೊದಲು ಉತ್ತರಿಸಲಿ ಎಂದರು.




