Site icon nadubadenews.com

3 ತಿಂಗಳಲ್ಲಿ 3 ತಾಲೂಕಿನ 1600 ಆದಿವಾಸಿಗಳಿಗೆಹಕ್ಕುಪತ್ರವಿತರಣೆಗೆ ಕ್ರ; ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

3 ತಿಂಗಳಲ್ಲಿ 3 ತಾಲೂಕಿನ 1600 ಆದಿವಾಸಿಗಳಿಗೆಹಕ್ಕುಪತ್ರವಿತರಣೆಗೆ ಕ್ರ; ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ
Spread the love
3 ತಿಂಗಳಲ್ಲಿ 3 ತಾಲೂಕಿನ 1600 ಆದಿವಾಸಿಗಳಿಗೆಹಕ್ಕುಪತ್ರವಿತರಣೆಗೆ ಕ್ರ; ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ

ಮಡಿಕೇರಿ,ಜು.11; (nadubadenews):  ಮುಂದಿನ 3 ತಿಂಗಳಲ್ಲಿ ಜಿಲ್ಲೆಯ ಅದಿವಾಸಿಗಳಿಗೆ  ಮುಖ್ಮಮಂತ್ರಿಗಳಿಂದ ಹಕ್ಕು ಪತ್ರ ವಿತರಣೆಯ ಮಹತ್ವದ ತೀಮಾ೯ನ ಕೈ ಗೊಳ್ಳಲಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ನಿವೇಶನ ರಹಿತ ಆದಿವಾಸಿಗಳನ್ನು ಸಮೀಕ್ಷೆ ಮೂಲಕ ಗುರುತಿಸಲಾಗಿದ್ದು, ಸುಮಾರು 60 ಎಕ್ರೆ ಸಕಾ೯ರಿ ಜಾಗದಲ್ಲಿ ನಿವೇಶನ ರಹಿತ ಆದಿವಾಸಿಗಳಿಗೆ ನಿವೇಶನದ ಹಕ್ಕು ಪತ್ರ ನೀಡಿಕೆಗೆ ನಿಧಾ೯ರ ಮಾಡಲಾಗಿದೆ ಎಂದರು ಮುಂದಿನ ದಿನಗಳಲ್ಲಿ ಸಿಕ್ಕಸಿಕ್ಕಲ್ಲಿ ಶೆಡ್ ನಿಮಿ೯ಸಿ ಮನೆ ನಿರ್ಮಿಸಬೇಡಿ ಎಂದು ಪೊನ್ನಣ್ಣ ಮನವಿ ಮಾಡಿದರು.

          ಮುಂದು ವರೆದು ಮಾತನಾಡಿದ ಅವರು ನಾಡಿನಲ್ಲಿ ಕೖಷಿ ಜಮೀನು ನಾಶ ಪಡಿಸುತ್ತಿರುವ  ಆನೆಗಳನ್ನು ಕಾಡಿಗಟ್ಟಲು ಮಹತ್ವದ ಕ್ರಮಕ್ಕೆ ಅರಣ್ಯ ಇಲಾಖೆ ಮುಂದಾಗಿದ್ದು,ಈಗಾಗಲೇ 4 ಹುಲಿಗಳನ್ನು ಸೆರೆ ಹಿಡಿಯಲು ಸಕಾ೯ರ ಅನುಮತಿ ನೀಡಿದೆ. ಹೀಗಿದ್ದರೂ ಹುಲಿಗಳನ್ನು ಗುರುತಿಸಿ ಸೆರೆಹಿಡಿಯಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಹುಲಿ ಸೆರೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಗುರುವಾರ ಅರಣ್ಯ ಇಲಾಖೆಯ ಅಧಿಕಾರಿ ವಗ೯ದೊಂದಿಗೆ ಮಹತ್ವದ ಸಭೆ ನಡೆಸಿ ವಿರಾಜಪೇಟೆ ಕ್ಷೇತ್ರದಲ್ಲಿ ಆನೆ, ಹುಲಿ ಧಾಂಧಲೆಗೆ ಶಾಶ್ವತ  ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

            ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧಮ೯ಜ ಉತ್ತಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ಪಿ.ಕೆ. ಪೊನ್ನಪ್ಪ ಉಪಸ್ಥಿತರಿದ್ದರು.

Exit mobile version