Site icon nadubadenews.com

ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ
Spread the love
ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಮಡಿಕೇರಿ, ಫೆ.11: ಕಛೇರಿಯಲ್ಲಿ ನಡೆಯಲಿದ್ದ ಸಭೆಗೆ ಆಗಮಿಸಿ ಆಸೀನರಾಗುವಾಗ,  ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ (59) ಅವರು ಇಂದು ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಶ್ರೀಧರಮೂರ್ತಿ ಅವರು ಚೇರ್ ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆದರೆ ಹಠಾತ್ತಾನೆ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರಮೂರ್ತಿ ಅವರು ಕೊಡಗು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿ ನೇಮಕಗೊಂಡು ಇಂದಿಗೆ 28 ದಿವಸ ಗಳಷ್ಟೇ ಆಗಿದ್ದು,  ಮುಂದಿನ  ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದರು

Exit mobile version