Site icon nadubadenews.com

ಪೇರಿಯಂಡ ಪೆಮ್ಮಯ್ಯ ದೇವಕ್ಕಿ ಹೆಸರಿನ ದತ್ತಿ ನಿಧಿ ಸ್ಥಾಪನೆ

Spread the love


ಮಡಿಕೇರಿ, ಮೇ.29: (nadubadenews): ಕೊಡಗು ಜಿಲ್ಲೆಯ ವಕೀಲರಾದ ಪೇರಿಯಂಡ ಪಿ ಪೆಮ್ಮಯ್ಯ ಮತ್ತು ಶ್ರೀಮತಿ ಜಿ.ಕೆ ದೇವಕಿ ಪೆಮ್ಮಯ್ಯ ರವರು ಕೊಡಗಿನ ಲೇಖಕರಿಗಾಗಿ ದತ್ತಿ ಪ್ರಶಸ್ತಿ ಸ್ಥಾಪಿಸಿರುತ್ತಾರೆ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ಈ ಪ್ರಶಸ್ತಿಗಾಗಿ ಇವರು ಒಂದು ಲಕ್ಷ ರೂಗಳ ದತ್ತಿಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖಾಂತರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಠೇವಣಿ ಇಡುವ ಮೂಲಕ ಸ್ಥಾಪಿಸಿದ್ದಾರೆ.
ಕೊಡಗು ಜಿಲ್ಲೆಯ ಲೇಖಕರು ಪ್ರಕಟಿಸಿರುವ ಕಥೆ, ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ವೈಚಾರಿಕ ಲೇಖನಮಾಲೆ, ಲೇಖನಗಳ ಗುಚ್ಚಗಳಲ್ಲಿ ಹಿಂದಿನ ಐದು ವರ್ಷಗಳ ಒಳಗಾಗಿ ಪ್ರಕಟಗೊಂಡಿರುವ ಉತ್ತಮ ಕೃತಿ ಆಯ್ಕೆ ಮಾಡಿ ಪ್ರಶಸ್ತಿ ನೀಡುವುದು ಈ ದತ್ತಿಯ ಉದ್ದೇಶ. ಕೊಡಗು ಜಿಲ್ಲೆಯ ಲೇಖಕರಿಗೆ ಮಾತ್ರ ಸೀಮಿತವಾಗಿರುವ ದತ್ತಿ ಪ್ರಶಸ್ತಿ ಇದಾಗಿದೆ. ಈಗಾಗಲೇ ಕೊಡಗು ಜಿಲ್ಲೆಯ ಲೇಖಕರುಗಳಿಗಾಗಿ ಮೂರು ಪ್ರಶಸ್ತಿಗಳು ಇದ್ದು ಇದು ನಾಲ್ಕನೇ ಪ್ರಶಸ್ತಿ ಆಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Exit mobile version