Site icon nadubadenews.com

ನಾಪತ್ತೆಯಾದ ಮಾಜಿ ಸೈನಿಕ ಇನ್ನೂ ಸಿಗದ ಸುಳಿವು

ನಾಪತ್ತೆಯಾದ ಮಾಜಿ ಸೈನಿಕ ಇನ್ನೂ ಸಿಗದ ಸುಳಿವು
Spread the love
ನಾಪತ್ತೆಯಾದ ಮಾಜಿ ಸೈನಿಕ ಇನ್ನೂ ಸಿಗದ ಸುಳಿವು

ಕುಶಾಲನಗರ, ಜೂ.19: (nadubadenews):  ಕುಶಾಲನಗರ ತಾಲೂಕು ಚೆಟ್ಟಳ್ಳಿ ನಿವಾಸಿ ಮಾಜೀ ಸೈನಿಕ್‌ ಗಿರೀಶ್‌ ಅವರು ನಾಪತ್ತೆಯಾಗಿದ್ದು, ಇನ್ನೂ ಕೂಡ ಅವರ ಸುಳಿವು ಸಿಕ್ಕಿಲ್ಲವೆಂದು ಪೊಲೀಸ್‌ ಇಲಾಖೆ ತಿಳಿಸಿದೆ.

          ಪ್ರಸ್ತುತ SLN ಸಂಸ್ಥೆಯಲ್ಲಿ ಉದ್ಯೋಗಿ ಆಗಿರುವ 46ವರ್ಷ ಪ್ರಾಯದ ಗಿರೀಶ್‌ ಅವರ ದ್ವಿಚಕ್ರ ವಾಹನ ಬೆಟ್ಟಗೇರಿ ಕಾವೇರಿ ನದಿ ಬಳಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಂದ ಕಾವೇರಿ ನದಿಯಲ್ಲಿ ಕುಶಾಲನಗರ ಪೊಲೀಸರು, ಅಗ್ನಿ ಶಾಮಕ ದಳ, ಎನ್ ಡಿಆರ್ ಎಫ್ ಸಿಬ್ಬಂದಿಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಗಿರೀಶ್‌ ಅವರ ಸುಳಿವು ಬೆಳಗ್ಗಿನಿಂದ ಈ ವರೆಗೂ ಲಭ್ಯವಾಗಿಲ್ಲ. ಪಕ್ಕದಲ್ಲಿಯೇ ತೂಗು ಸೇತುವೇಯೂ ಇದ್ದು, ದಾಟಿ ಆ ಬದಿಗೆ ತೆರಳಿದ್ದಾರೆಯೇ ಅಥವಾ ಹೊಳೆಹಲ್ಲೆನಾದರೂ ಅನಾಹುತಾ ಆಗಿದೆಯ ಎಂಬ ಅನುಮಾನದಿಂದ, ಕುಶಾಲನರ  ಪೊಲೀಸರು ಎಫ್‌. ಐ. ಆರ್‌ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

Exit mobile version