Site icon nadubadenews.com

ಕೊಡಗಿನ ಜಮ್ಮಬಾಣೆ, ಪಟ್ಟೇದಾರ, ಪಹಣಿ ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಕೊಡಗಿನ ಜಮ್ಮಬಾಣೆ,  ಪಟ್ಟೇದಾರ, ಪಹಣಿ  ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 
Spread the love
ಕೊಡಗಿನ ಜಮ್ಮಬಾಣೆ,  ಪಟ್ಟೇದಾರ, ಪಹಣಿ  ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಬೆಂಗಳೂರು;ಜು.15;(nadubadenews): ಕೊಡಗಿನ ಜಮ್ಮಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ P ನಂಬರ್ ಗಳ ಸಮಸ್ಯೆಯನ್ನ ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತಿದ್ದುಪಡಿ ತರಬೇಕೆಂದು ಮಾನ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಮನವಿ ಸಲ್ಲಿಸಿದರು. ಪೂರಕವಾಗಿ ಸ್ಪಂದಿಸಿದ ಮಾನ್ಯ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂಬ ಭರವಸೆಯನ್ನು ನೀಡಿದರು.

Exit mobile version