Site icon nadubadenews.com

ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
Spread the love
ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ವಿರಾಜಪೇಟೆ, ಜು.12;    ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ದಿನಾಂಕ 11.07.25ರ ಶುಕ್ರವಾರ ನಡೆಸಲಾಯಿತು.  ಕಾಲೇಜಿನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ, ಪ್ರಾಂಶುಪಾಲರಾದ  ಶ್ರೀ ಎನ್.ಎಂ. ನಾಣಯ್ಯ ಅವರು, ಪ್ರತೀ  ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ, ಕಾಲೇಜು ಹಂತವು ಮಹತ್ತರ ಪಾತ್ರವನ್ನು ವಹಿಸುತ್ತದೆ, ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆಯನ್ನು ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು,  ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕೆಂದು ಕಿವಿ ಮಾತನ್ನು ಹೇಳಿದರು.

 ವಿದ್ಯಾರ್ಥಿಗಳಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಸಿಹಿ ವಿತರಿಸುವುದರೊಂದಿಗೆ ಸ್ವಾಗತಿಸಲಾಯಿತು.  ಮೊದಲಿಗೆ ಕುಮಾರಿ ಭೂಮಿಕಾ ಮತ್ತು ತಂಡದವರು ಪ್ರಾರ್ಥಿಸಿದರೆ, ನೆರದಿದ್ದ ಸರ್ವರನ್ನು  ಕುಮಾರಿ ಪ್ರಕೃತಿ  ಸ್ವಾಗತಿಸಿ,  ಕುಮಾರಿ  ಪ್ರತೀಕ್ಷಾ ಸರ್ವರನ್ನು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು  ಕುಮಾರಿ ಡೋನಾ ನೆರವೇರಿಸಿದರೆ, ರಾಷ್ಟ್ರ ಗೀತೆಯೊಂದಿಗೆ  ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.   

Exit mobile version